Header Ads Widget

​ ಸರ್ಕಾರಿ ಶಾಲೆಯಲ್ಲಿ 141ನೇ ಮನೆಯೇ ಗ್ರಂಥಾಲಯ ಅಭಿಯಾನ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್  ಉಡುಪಿ ತಾಲೂಕು ಘಟಕದ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡಿಬೈಲು   ಶಾಲೆಯಲ್ಲಿ141ನೇ ಮನೆಯೇ ಗ್ರಂಥಾಲಯ ಅಭಿಯಾನ ಕಾರ್ಯ ಕ್ರಮ ನಡೆಯಿತು.



ಕಾರ್ಯಕ್ರಮದಲ್ಲಿ ಮಾತನಾಡಿದ ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ ಪರಿಷತ್ ನ ವಿವಿಧ ಕಾಯ೯ಕ್ರಮ ಮತ್ತು ಮುಂದಿನ ಯೋಜನೆಗಳ ವಿವರ ನೀಡಿದರು.​ ಈ ಸಂದಭ೯ದಲ್ಲಿ ಶಾಲಾ ಮುಖ್ಯ ಶಿಕ್ಷಕಿಯವರಿಗೆ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು. 


ವೇದಿಕೆಯಲ್ಲಿ ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡ್ಕ ಅಧ್ಯಕ್ಷರಾದ ಪ್ರೊ. ಮುರಳಿಧರ್ ಉಪಾಧ್ಯ ಹಿರಿಯಡ್ಕ, ಶಾಲಾ ಮುಖ್ಯ ಶಿಕ್ಷಕಿ ನಿಮ೯ಲಾ, ನಿವೃತ್ತ ಶಿಕ್ಷಕಿ ಶಾರದ ಉಪಾಧ್ಯ'ತಾಲೂಕು ಗೌರವ ಕಾಯ೯ದಶಿ೯ ರಂಜಿನಿ ವಸಂತ್, ಮನೆಯೇ ಗ್ರಂಥಾಲಯ ಅಭಿಯಾನದ ಸಂಚಾಲಕ ರಾಘವೇಂದ್ರ ಪ್ರಭು ಕವಾ೯ಲು, ತಾಲೂಕು ಮಾಧ್ಯಮ ಪ್ರತಿನಿಧಿ ಸಿದ್ದಬಸಯ್ಯಸ್ವಾಮಿ ಚಿಕ್ಕಮಠ ಮುಂತಾದವರಿದ್ದರು​.