ಅಮೃತಸದೃಶವಾದ ಹಾಲು ನೀಡಿ ಕೋಟ್ಯಂತರ ಜನರ ಬದುಕಿಗೆ ಆಸರೆಯಾಗಿರುವ ಗೋವುಗಳ ಕೆಚ್ಚಲನ್ನೇ ಕೊಯ್ದು ಗೋವುಗಳಿಗೆ ಚಿತ್ರಹಿಂಸೆ ಹಾಗೂ ಗೋವಿನ ಬಗ್ಗೆ ಪವಿತ್ರ ಭಾವನೆ ಹೊಂದಿರುವ ಜನಸಮುದಾಯಕ್ಕೆ ಇನ್ನಿಲ್ಲದ ಮಾನಸಿಕ ಹಿಂಸೆ ನೀಡುತ್ತಿರುವ ಕಂಡು ಕೇಳರಿಯದ ವಿದ್ಯಮಾನಗಳು ರಾಜ್ಯದಲ್ಲಿ ನಡೆಯುತ್ತಿದೆ . ಆದರೆ ಗೋವಿನ ಹಾಲೇ ತಮ್ಮ ಅಸ್ತಿತ್ವದ ಜೀವಾಳವಾಗಿರುವ ಕೆ ಎಂ ಎಫ್ ನಂಥಹ ರಾಜ್ಯದ ಹಾಲು ಮಾರಾಟ ಒಕ್ಕೂಟಗಳು ಈ ವಿಚಾರದಲ್ಲಿ ಜಾಣಮೌನವಹಿಸಿರುವುದು ಅತ್ಯಂತ ಖಂಡನೀಯ .
ಗೋವಿನ ಹಾಲು ಮಾತ್ರ ಬೇಕು ; ಆದರೆ ಗೋವಿನ ಆಕ್ರಂದನ ಮತ್ತು ಹೈನುಗಾರರ ಬವಣೆಗೂ ನಮಗೂ ಸಂಬಂಧವೇ ಇಲ್ಲ ಎಂಬ ಧೋರಣೆ ಸರ್ವಥಾ ಸರಿಯಲ್ಲ . ಗೋವುಗಳಿಗೆ ಈ ರೀತಿಯ ಮಾರಣಾಂತಿಕ ಚಿತ್ರ ಹಿಂಸೆ ಕೊಟ್ಟು , ಗೋವನ್ನು ಸಲಹಿಕೊಂಡು ಹಾಲು ಮಾರಿ ಜೀವನ ಸಾಗಿಸುತ್ತಿರುವ ಸಾವಿರಾರು ಹೈನುಗಾರರ ನೈತಿಕ ಸ್ಥೈರ್ಯಕ್ಕೆ ಸವಾಲೆಸೆಯುವ ಇಂಥಹ ದುಷ್ಕೃತ್ಯಗಳ ವಿರುದ್ಧ ಕೆ ಎಂ ಎಫ್ ಮೊದಲಾಗಿ ನಿಂತು ಧ್ವನಿ ಎತ್ತಬೇಕು .ಹಸುಗಳು ಮತ್ತು ಹೈನುಗಾರರಿಲ್ಲದೆ ಕೆ ಎಂ ಎಫ್ ಗಳ ಅಸ್ತಿತ್ವವೇ ಇಲ್ಲ . ಹಾಗಿರುವಾಗ ಗೋವುಗಳ ಮತ್ತು ಗೋಪಾಲಕರ ನೋವಿನ ವಿಚಾರದಲ್ಲಿ ಶೂನ್ಯಸ್ಪಂದನದ ಕೆ ಎಂ ಎಫ್ ಧೋರಣೆ ಅಕ್ಷಮ್ಯ .
~ಜಿ ವಾಸುದೇವ ಭಟ್ ಪೆರಂಪಳ್ಳಿ
0 ಕಾಮೆಂಟ್ಗಳು