ಉಡುಪಿ ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲಯದಲ್ಲಿ ನಾಗರ ಪಂಚಮಿ ಆಚರಣೆಯು ಇದೆ ತಿಂಗಳ ತಾರೀಕು 29ರ ಮಂಗಳವಾರದಂದು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಶ್ರೀಯುತ ಅನೀಶ್ ಆಚಾರ್ಯ ಅವರ ನೇತ್ರತ್ವದಲ್ಲಿ ನೆರವೇರಲಿದೆ.
ಸಾಮೂಹಿಕವಾಗಿ ನೆರವೇರಲಿರುವ ಈ ನಾಗರ ಪಂಚಮಿಯ ಆಚರಣೆಯ ಪ್ರಯುಕ್ತ ಕ್ಷೇತ್ರದಲ್ಲಿ ವಿಶೇಷವಾದ ತನು ತಂಬಿಲ ಸೇವೆ ಪಂಚಾಮೃತ ಸೇವೆ ಪ್ರಸನ್ನ ಪೂಜೆಗಳು ಪ್ರಾತಃಕಾಲದಿಂದ ಆರಂಭಗೊಂಡು ಮಧ್ಯಾಹ್ನದ ತನಕ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.
0 ಕಾಮೆಂಟ್ಗಳು