Header Ads Widget

​ಕೊಡವೂರು: ಔಷಧೀಯ ಕಷಾಯ ವಿತರಣೆ

ಬ್ರಾಹ್ಮಣ ಮಹಾಸಭಾ ಕೊಡವೂರು ವತಿಯಿಂದ  ‌ದೀವಿಗೆ ಅಮಾವಾಸ್ಯೆಯ ಪ್ರಯುಕ್ತ  ಸಾರ್ವಜನಿ ಕರಿಗೆ  ಹಾಲೆ ಮರದ ತೊಗಟೆಯ ಔಷಧೀಯ ಕಷಾಯ ವಿತರಣೆ ಕಾರ್ಯಕ್ರಮವು ವಿಪ್ರಶ್ರೀ ಕಲಾ ಭವನಲ್ಲಿ ದಿನಾಂಕ 24-07-2025 ರಂದು ನಡೆಯಿತು.

ಆಯುರ್ವೇದ  ವೈದ್ಯರಾದ ಡಾ.ರೋಹಿತ್ ಭಾಗವತ್ ಕಿದಿಯೂರು ಭಾಗವಹಿಸಿ ಆಟಿ ಅಮಾವಾಸ್ಯೆ ಯ ಬಗ್ಗೆ, ಹಾಲೆ ಮರದ ಔಷಧೀಯ ಗುಣಗಳ ಬಗ್ಗೆ ಮತ್ತು ಅದರ ಕಷಾಯ ಸೇವನೆಯ ವೈಜ್ಞಾನಿಕ ಹಿನ್ನಲೆ ಬಗ್ಗೆ ಮಾಹಿತಿ ನೀಡಿದರು. ಸಂಘದ ಸದಸ್ಯರು ಉಪಸ್ಥಿತರಿದ್ದರು. 


 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು