ಕೋಟೇಶ್ವರ ಕ್ಷೇತ್ರದ ಕೋಟಿ ತೀರ್ಥದ ದಂಡೆಯಲ್ಲಿದ್ದ ಉಡುಪಿ ಶ್ರೀ ಭಂಡಾರಕೇರಿ ಮಠದ 18ನೇ ಯತಿಗಳಾದ ಶ್ರೀ ರಘುಭೂಷಣ ತೀರ್ಥ ಶ್ರೀಪಾದರ ಬೃಂದಾವನ ಪೂರ್ಣ ಶಿಥಿಲಾವಸ್ಥೆಯಲ್ಲಿತ್ತು. ಇದನ್ನರಿತು ಸ್ಥಳೀಯರೆಲ್ಲ ಸೇರಿನೂತನ ಬೃಂದಾವನ ನಿರ್ಮಿಸಲು ಪ್ರಾರಂಭಿಸಿದ್ದಾರೆ.
ಶ್ರೀ ಭಂಡಾರಕೇರಿ ಮಠಾಧೀಶ ಶ್ರೀ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ತಮ್ಮ ಚಾತುರ್ಮಾಸ್ಯ ಅವಧಿಯಲ್ಲಿ ಬೃಂದಾವನ ಪರಿಸರವನ್ನು ಸ್ವಚ್ಛ ಮಾಡಿಸಿ, ನೂತನ ಬೃಂದಾವನ ನಿರ್ಮಾಣದ ಕಾಮಗಾರಿ ವೀಕ್ಷಿಸಿದರು.
0 ಕಾಮೆಂಟ್ಗಳು