ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ (ರಿ) ಉಡುಪಿ ಯ 27ನೇ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಶ್ರೀ ಕಡಿಯಾಳಿ ಮಹಿಷ ಮರ್ದಿನಿ ದೇವಾಲಯದ ಶರ್ವಾಣಿ ಸಭಾಂಗಣದಲ್ಲಿ ಶ್ರೀಕಾಂತ್ ಉಪಾಧ್ಯರ ಅಧ್ಯಕ್ಷತೆಯಲ್ಲಿ ನೆರವೇರಿತು. ಡಾ ಟಿ ಎಸ್ ರಮೇಶ್ ಉಡುಪಿ ಸಂಸ್ಕೃತ ವಿಭಾಗದ ಮುಖ್ಯಸ್ಥರು ಪೂರ್ಣಪ್ರಜ್ಞಾ ಕಾಲೇಜು, ಡಾಕ್ಟರ್ ಎಂ ಹರಿಶ್ಚಂದ್ರ ಗಾಂಧಿ ಹಾಸ್ಪಿಟಲ್ ಉಡುಪಿ ಮುಖ್ಯಸ್ಥರು , ಡಾ ರಶ್ಮಿ ಗುರುಮೂರ್ತಿ ನೃತ್ಯ ವಿದುಷಿ ಹಾಗೂ ಆಯುರ್ವೇದ ತಜ್ಞರು, ಶ್ರೀ ಕೃಷ್ಣಮೂರ್ತಿ ಆಚಾರ್ಯ ನಿಕಟಪೂರ್ವ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಜಯದುರ್ಗ ಪರಮೇಶ್ವರಿ ದೇವಸ್ಥಾನ ಕನ್ನರ್ಪಾಡಿ ಉಡುಪಿ, ಶ್ರೀ ವಿಜಯ ರಾಘವ ರಾವ್ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಮಹಿಷ ಮರ್ದಿನಿ ದೇವಸ್ಥಾನ ಕಡಿಯಾಳಿ ಉಡುಪಿ, ಗೌರವ್ಯಾಧ್ಯಕ್ಷರಾದ ಶ್ರೀ ಮಂಜುನಾಥ ಉಪಾಧ್ಯಾಯರು,ಮಹಿಳಾ ಅಧ್ಯಕ್ಷರಾದ ಶೋಭಾ ಉಪಾಧ್ಯಾಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು,ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ 42ಕ್ಕೂ ಹೆಚ್ಚು ಪ್ರತಿಭಾವಂತ ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು ಮತ್ತು ಆಶಕ್ತ ವಿಪ್ರರಿಗೆ ಧನಸಹಾಯ ಮಾಡಲಾಯಿತು ವಿವಿಧ ಬ್ರಾಹ್ಮಣ ವಲಯಗಳ ಪದಾಧಿಕಾರಿಗಳು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಕೋಶಾಧಿಕಾರಿಗಳಾದ ಹಯವದನ ಭಟ್ ಲೆಕ್ಕ ಪತ್ರ ಮಂಡಿಸಿದರು,ಪ್ರಧಾನ ಕಾರ್ಯದರ್ಶಿಗಳಾದ ಕೆ ದುರ್ಗಾ ಪ್ರಸಾದ್ ಭಾರ್ಗವ್ ರವರು ವಾರ್ಷಿಕ ವರದಿ ವಾಚಿಸಿದರು ಮತ್ತು ವಂದನಾರ್ಪಣೆ ನೀಡಿದರು ಶ್ರೀನಿವಾಸ್ ಬಲ್ಲಾಳ್ ಹಾಗೂ ಸೌಧಾಮಿನಿ ರಾವ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

0 ಕಾಮೆಂಟ್ಗಳು