ಚಿತ್ರಕಲಾ ಪ್ರಪಂಚ ಕಾರ್ಯಕ್ರಮ

"ಕಲ್ಪನೆ ಮತ್ತು ವಾಸ್ತವ ಹದವಾಗಿ ಎರಕಗೊಂಡಾಗ ಉತ್ತಮ ಚಿತ್ರ ರಚನೆ ಸಾಧ್ಯವಾಗುತ್ತದೆ. ವಸ್ತು ಮತ್ತು ಮಾಧ್ಯಮದ ನಡುವೆ ಸಮನ್ವಯವಿರಬೇಕು. ಚಿತ್ರ ರಚನೆಯಲ್ಲಿ ಪ್ರಮಾಣಬದ್ಧತೆ ಬಲುಮುಖ್ಯ ಪಾತ್ರವಹಿಸುತ್ತದೆ. ಪ್ರಮಾಣ ಏರುಪೇರಾದರೆ ಚಿತ್ರ ವಿಕಾರವಾಗುತ್ತದೆ" ಎಂದು ಖ್ಯಾತ ಚಿತ್ರ ಕಲಾವಿದ, ರಾಜ್ಯಪ್ರಶಸ್ತಿ ಪುರಸ್ಕೃತ ಶ್ರೀ ಪಿ.ಎನ್ ಆಚಾರ್ಯ ಈಚೆಗೆ ನುಡಿದರು. ಅವರು ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಮೂರನೆಯ ಸೆಮಿಸ್ಟರ್ ವಿದ್ಯಾರ್ಥಿ ಶಿಕ್ಷಕರಿಗಾಗಿ ಚಿತ್ರಕಲಾ ಪ್ರಪಂಚ ಎಂಬ ಕಾರ್ಯಕ್ರಮ ದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಶ್ರೀ ಆಚಾರ್ಯರು ಜಲವರ್ಣ ಚಿತ್ರಕಲೆ,ದಾರಕಲೆ ಮತ್ತು ವೈದ್ಯಕೀಯ ಚಿತ್ರಕಲೆಯ ಬಗ್ಗೆ ವಿಶೇಷವಾದ ಮಾಹಿತಿ ನೀಡಿದ್ದಲ್ಲದೆ ಪ್ರಾತ್ಯಕ್ಷಿಕೆಯನ್ನೂ ಒದಗಿಸಿದರು.ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶ್ರೀ ಅನಂತರಾಜ್ ಆಚಾರ್ಯ ಸ್ವಾಗತ ಕೋರಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಶ್ರೀ ಕಾರ್ತಿಕ್ ಧನ್ಯವಾದ ಸಲ್ಲಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು