Header Ads Widget

​ವನಸುಮ ವೇದಿಕೆಯ ಸಾರಥ್ಯ ವಿನಯ್ ಆಚಾರ್ಯ​ ಮುಂಡ್ಕೂರು ಬಗಲಿಗೆ


ಕಾಪು : ವನಸುಮ ವೇದಿಕೆ (ರಿ.) ಕಟಪಾಡಿ ಇದರ ವಾರ್ಷಿಕ​ ಮಹಾಸಭೆ ಜು. 4, ಶುಕ್ರವಾರ ದಂದು ಕಟಪಾಡಿಯ​ ವನಸುಮ ವೇದಿಕೆಯ ಕಛೇರಿಯಲ್ಲಿ ನಡೆಯಿತು.


ಬಾಸುಮ ಕೊಡಗು ಅಧ್ಯಕ್ಷತೆಯಲ್ಲಿ ನಡೆದ ಆಡಳಿತ​ ಮಂಡಳಿಯ ಆಯ್ಕೆ ಪ್ರಕ್ರಿಯೆಯಲ್ಲಿ 2025-26 ನೇ​ ಸಾಲಿನ ನೂತನ ಅಧ್ಯಕ್ಷರನ್ನಾಗಿ ವಿನಯ್ ಆಚಾರ್ಯ​ ಮುಂಡ್ಕೂರು, ಉಪಾಧ್ಯಕ್ಷರನ್ನಾಗಿ ಭಾಸ್ಕರ್ ಉದ್ಯಾವರ,​ ​ಕಾರ‍್ಯದರ್ಶಿಯನ್ನಾಗಿ ಸೋನಿ ಪ್ರಭುದನ್‌ರವ ರನ್ನು​ ಆಯ್ಕೆ ಮಾಡಲಾಯಿತು. 


ಜೊತೆ ​ಕಾರ‍್ಯದರ್ಶಿಯಾಗಿ ಕು.ರಮ್ಯಾ ಕಾಮತ್, ಕೋಶಾಧಿಕಾರಿಯಾಗಿ ಕು. ಪಲ್ಲವಿ​ ಕೊಡಗು, ಸಾರ್ವಜನಿಕ ಸಂಪರ್ಕಾಧಿಕಾರಿ​ ಯಾಗಿ​ ಶುಭ​ಲಕ್ಷ್ಮೀ  ಕಡೆಕಾರ್ ಮತ್ತು ನಿರ್ದೇಶಕರಾಗಿ ಕಾಪು​ ಶ್ರೀಕಾಂತ್​ ಆಚಾರ್ಯ, ಸುದರ್ಶನ್ ಪಡುಕೆರೆ, ರಾಕೇಶ್​ ಆಚಾರ್ಯ ಹಾಗೂ ಕುಮಾರ್ ಪಿ ಇವರನ್ನು​ ನೇಮಿಸಲಾಯಿತು. 


ವೇದಿಕೆಯ ಗೌರವ​ ಸಲಹೆಗಾರರನ್ನಾಗಿ ಗುರುರಾಜ್ ಮಾರ್ಪಳ್ಳಿ, ಬಾಸುಮ​ ಕೊಡಗು,  ಜಯ ರಾಂ ನೀಲಾವರ, ಇವರನ್ನು ಆಯ್ಕೆ​ ಮಾಡಲಾಯಿತು.​ ಜೀವನ್ ಶೆಟ್ಟಿಯವರು ವೇದಿಕೆಯ​ ಲೆಕ್ಕಪರಿಶೋಧಕರಾಗಿ ನಿಯೋಜಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು