Header Ads Widget

​ಚಾತುರ್ಮಾಸ್ಯ ವ್ರತ: ಪೇಜಾವರ ಮಠ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶೋಭಾಯಾತ್ರೆಯಲ್ಲಿ ಭಾಗಿ


ಬೆಂಗಳೂರು: ಬಸವನಗುಡಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳ ಲಿರುವ ಪರಮಪೂಜ್ಯ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀಶ್ರೀಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮತ್ತು ಶ್ರೀ ಶಿರೂರು ಮಠಾಧೀಶರಾದ ಶ್ರೀಶ್ರೀಶ್ರೀ ವೇದವರ್ಧನತೀರ್ಥ ಶ್ರೀಪಾದರ ಸ್ವಾಗತ ಸಮಾರಂಭ.  ಭವ್ಯ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ.




ಶೀರೂರು ಮಠದ ದಿವಾನರಾದ  ಡಾ||ಉದಯಕುಮಾರ್ ಸರಳ್ತಾಯ, ಪಾರಪತ್ಯಗಾರರಾದ ಶ್ರೀಶಭಟ್ ಕಡೆಕಾರ್ ರವರು ಶಾಸಕರಾದ ರವಿಸುಬ್ರಮಣ್ಯ, ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಚಾತು ರ್ಮಾಸ್ಯ ಸಮಿತಿ ಅಧ್ಯಕ್ಷರಾದ  ರಾಮಚಂದ್ರ ಉಪಾಧ್ಯ, ಉತ್ತರಾಧಿ ಮಠದ ನಿರ್ದೇಶಕ ಸತ್ಯಧ್ಯಾನ ಚಾರ್ಯ ಕಟ್ಟಿ, ಕೇಶವ ಬಾಯರಿ, ಅಖಿಲ ಭಾರತ ಮಾಧ್ವ ಮಂಡಲ ಅಧ್ಯಕ್ಷರಾದ ಗೌತಮ್ ಹೆಚ್.ವಿ. ಮತ್ತು ಹರಿದಾಸ ಭಟ್ ರವರು, ವೀರನಾರಾಯಣ ಪಾಂಡುರಂಗಿ,  ವಿದ್ಯಾಪೀಠ ವ್ಯವಸ್ಥಾಪಕರು ಶಶಾಂಕ್ ಅಚಾರ್ಯ,ಕಾಂಗ್ರೆಸ್ ಪಕ್ಷದ ಮುಖಂಡರಾದ ಬಾಲಾಜಿರವರು ಉಪಸ್ಥಿತರಿದ್ದರು.



ಭವ್ಯ ಶೋಭಯಾತ್ರೆಯು ನವ ಮಂತ್ರಾಲಯ ರಾಯರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭವ್ಯ ಮೆರ ವಣಿಗೆಯಲ್ಲಿ ವಿದ್ಯಾಪೀಠ ರಸ್ತೆಯ ಮೂಲಕ ಪೂರ್ಣಪ್ರಜ್ಞಾ ವಿದ್ಯಾಪೀಠದವರಗೆ ಸಾಗಿತು.​ ನೂರಾರು ಅಗಮ ಪಂಡಿತರು, ಮಹಿಳಾ ಮಂಡಳಿಯವರಾದ ತ್ರಿಪುರ ಸುಂದರಿ, ಗಿರಿವಾಸವಿ ತಂಡದವರಿಂದ ಭಕ್ತಿಗೀತೆ ಹಾಡಿದರು , ಯಕ್ಷಗಾನ ವೇಷಧಾರಿಗಳು, ಪೂಜಾಕುಣಿತ, ಡೊಳ್ಳು, ವೀರಗಾಸೆ,ತಮಟೆವಾದ್ಯ ವಿವಿಧ ಕಲಾತಂಡಗಳು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು