Header Ads Widget

ಮರಣೋತ್ತರ ಕ್ರಿಯೆಗಳಿಗಾಗಿ ಮೆಲ್ಬೋರ್ನ್ ನಲ್ಲಿ ನೂತನ ಕಟ್ಟಡದ ಉದ್ಘಾಟನೆ

ಓಂ ಶಾಂತಿ ತೀರ್ಥ ಸಂಸ್ಥೆಯು ಶ್ರೀ ವೆಂಕಟಕೃಷ್ಣ ಬೃಂದಾವನದ ಸಹಯೋಗದೊಂದಿಗೆ ಪರಮ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥರ ಹಾಗೂ ಶ್ರೀ ಸುಶ್ರೇೇಂದ್ರ ತೀರ್ಥರ ಆಶೀರ್ವಾದಗಳೊಂದಿಗೆ ಮೆಲ್ಬೋರ್ನ್ ಮಹಾನಗರದಲ್ಲಿ ಹಿಂದೂ ಅಂತ್ಯಕ್ರಿಯೆಗಳಿಗೆ ವ್ಯವಸ್ಥೆಯನ್ನು 14-8-2025  ರಂದು ಪ್ರಾರಂಭಿಸಿದೆ.

ದಶಕಗಳಿಂದ ಬೇಡಿಕೆಯಿರುವ ಈ ವ್ಯವಸ್ಥೆಯನ್ನು ಶ್ರೀ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನಚಾರ್ಯ ರವರು ಉದ್ಘಾಟಿಯಾದರು.

OST ಯ ಕಾರ್ಯದರ್ಶಿ ರಾಧಾಕೃಷ್ಣರವರು ಸಂಸ್ಥೆಯ ಸೌಲಭ್ಯಗಳನ್ನು ವಿವರಿಸಿ ಎಲ್ಲರ ಸಹಕಾರವನ್ನು ಕೋರಿದರು. 

ಹಾಗೆ ಈ ಕಾರ್ಯದಲ್ಲಿ ಮೆಲ್ಬೋರ್ನ್ ನಗರದ ಶ್ರೀ ವೆಂಕಟ ಕೃಷ್ಣ ಬೃಂದಾವನ ನೀಡಿದ ಸಹಕಾರವನ್ನು ಶ್ಲಾಘಿಸಿದರು.

ಸರಳವಾದ ಸಮಾರಂಭವನ್ನು SvKB ಯ ರಮೇಶ ರಾವ್ ಸ್ವಾಗತಿಸಿದರು ಹಾಗೂ ಅವಿನಾಶ್ ಅಧ್ಯಾಪಕ್ ರವರು ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ SVKB ಯ ಕಾರ್ಯಕರ್ತರು ಹಾಗು OSTಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು