BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಆಚಾರ ವಿಚಾರ

ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯರ ನವತಿ ಜನ್ಮ ​​ವರ್ಧಂತಿ ಉತ್ಸವ ಕಾರ್ಯಕ್ರಮಗಳ ಉದ್ಘಾಟನೆ

ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ ಡಾ|| ಬನ್ನಂಜೆ ಗೋವಿಂದ ಪಂಡಿತಾಚಾ ರ್ಯರ ನವತಿ ಜನ್ಮವರ್ಧಂತ್ಯುತ್ಸವ ಸಮಿತಿ, ಉಡುಪಿ ಇವರ ಆಶ್ರಯದಲ್ಲಿ ಈಶಾವಾಸ್ಯ ಪ್ರತಿಷ್ಠಾನ (ರಿ.) ಅಂಬಲಪಾಡಿ, ಉಡುಪಿ​ ಇದರ ಸಹಯೋಗದಲ್ಲಿವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾ ಚಾರ್ಯರ ನವತಿ ಜನ್ಮ ​ವರ್ಧಂತಿ  ಉತ್ಸವ ಕಾರ್ಯಕ್ರಮಗಳ ಉದ್ಘಾಟನೆ ಕಾರ್ಯಕ್ರಮ​ ಶ್ರೀಕೃಷ್ಣ ಮಠದ ರಾಜಾಂಗಣ​ದಲ್ಲಿ   9/8/2025 ಶನಿವಾರ ಸಂಜೆ 5.30ಕ್ಕೆ​ ನಡೆಯಲಿದೆ 

ಉದ್ಘಾಟನೆ​ : ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣಮಠ,ಕೃತಿ ಬಿಡುಗಡೆ ಶ್ರೀ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು ಕಿರಿಯ ಪಟ್ಟಿ, ಶ್ರೀ ಪುತ್ತಿಗೆ ಮಠ​ ನಡೆಸಿಕೊಡಲಿದ್ದಾರೆ. ಅಧ್ಯಕ್ಷತೆ​ಯನ್ನು  ಶ್ರೀ ಕೆ ರಘುಪತಿ ಭಟ್, ಮಾಜಿ ಶಾಸಕರು ಅಧ್ಯಕ್ಷರು ಬನ್ನಂಜೆ ನವತಿ ಜನ್ಮ ವರ್ಧಾತಿ ಸಮಿತಿ​ ಇವರುಗಳು  ವಹಿಸಿಕೊಳ್ಳಲಿದ್ದಾರೆ. 

 
ಮುಖ್ಯ ​ಅತಿಥಿಗಳಾಗಿ : ಶ್ರೀ ಕೋಟ ಶ್ರೀನಿವಾಸ ಪೂಚಾರಿ, ಮಾನ್ಯ ಸಂಸದರು, ಉಡುಪಿ ಚಿಕ್ಕಮಗಳೂರು ಕ್ಷೇತ್ರ​, ಶ್ರೀ ಯಶ್ ಪಾಲ್ ಎ. ಸುವರ್ಣ, ಮಾನ್ಯ ಶಾಸಕರು, ಉಡುಪಿ​ ಆಗಮಿಸಲಿದ್ದಾರೆ  ಆಶಯ ಭಾಷಣ​ವನ್ನು  ಶತಾವಧಾನಿ ಡಾ॥ ಉಡುಪಿ ರಾಮನಾಥ ಆಚಾರ್ಯ​,  ಪ್ರಸ್ತಾವನೆ​ಯನ್ನು  ಬಾಲಾಜಿ ರಾಘವೇಂದ್ರ ಆಚಾರ್ಯ ಉದ್ಯಮಿ ಹಾಗೂ ವಿಶ್ವಸ್ತರು ಈಶಾವಾಸ್ಯ ಪ್ರತಿಷ್ಠಾನ (ರಿ.) ಉಡುಪಿ​ ಇವರುಗಳು ನಡೆಸಲಿದ್ದಾರೆ.  


ಗೌರವ ಉಪಸ್ಥಿತಿ​ : ಡಾ ಎ ರಾಘವೇಂದ್ರ ರಾವ್​, ಮುಖ್ಯಸ್ಥರು, ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು​,:ಪ್ರೊ ಎಂ ಬಿ ಪುರಾಣಿಕ್ ಅಧ್ಯಕ್ಷರು, ಶಾರದಾ ವಿದ್ಯಾ ಸಂಸ್ಥೆಗಳು, ಮಂಗಳೂರು​, : ಡಾ ನಿ ಬೀ ವಿಜಯ ಬಲ್ಲಾಳ್, ಆಡಳಿತ ಧರ್ಮ​ ದರ್ಶಿಗಳು, ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ, ಅಂಬಲಪಾಡಿ​, : ಶ್ರೀ ದಂಡತೀರ್ಥ ಸೀತಾರಾಮ ಭಟ್ ​ಧಾರ್ಮಿಕ ಮುಖಂಡರು, ಕೆ ರಮೇಶ್ ರಾವ್ ಬೀಡು, ಇಂಜಿನಿಯರ್ ಉಡುಪಿ​, ವಿದ್ವಾನ್ ಪಾವಂಜೆ ವಾಸುದೇವ ಭಟ್, ಜ್ಯೋತಿಷಿಗಳು


ಸಂಜೆ 7.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ :​ ಡಾ ಬನ್ನಂಜೆ ಆಚಾರ್ಯರ 'ಗಾಯತ್ರಿ ಚಿಂತನ' ಉಪನ್ಯಾಸ ಆಧಾರಿತ 'ವಿಶ್ವಾಮಿತ್ರ ಗಾಯತ್ರಿ' ನೃತ್ಯ ರೂಪಕ, ಶ್ರೀ ಸಂದೇಶ್ ಭಾರ್ಗವ್ ಮತ್ತು ತಂಡ ಕಲಾ ಸಂದೇಶ ಪ್ರತಿಷ್ಠಾನ ಮೈಸೂರು ಇವರಿಂದ​ ನಡೆ ಯಲಿದೆ. 
ಕಾರ್ಯಕರ್ಮಗಳು : ಬನ್ನಂಜೆ ಗೋವಿಂದಾಚಾರ್ಯರ ನವತಿ ​ವರ್ಧಂತಿ  ಉತ್ಸವ ಮತ್ತು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಕಾರ್ಯಕ್ರಮವು ವಿಶ್ವಾವಸು ಸಂವತ್ಸರದ ಆಷಾಢ ಮಾಸದ ಶುಕ್ಲ ಪಕ್ಷದ ಪೂರ್ಣಿಮೆ ಯಿಂದ ಕೃಷ್ಣ ಪಕ್ಷದ ತದಿಗೆ ವರೆಗೆ (09-08-2025ರಿಂದ 12-08-2025 ಶನಿವಾರ ಮಂಗಳವಾರ) ಅಂಬಲಪಾಡಿಯಲ್ಲಿರುವ ಡಾ|| ಬನ್ನಂಜೆ ಯವರ ಸ್ವಗೃಹ 'ಈಶಾವಾಸ್ಯಮ್'ನಲ್ಲಿ ನೆರವೇರಲಿದೆ.


09-08-2025ಡಾ ಬನ್ನಂಜೆಯವರ ಜನ್ಮದಿನ ಆಷಾಢ ಶುದ್ದ ಪೂರ್ಣಿಮೆ (ಹಯಗ್ರೀವ ಜಯಂತಿ) ಬೆಳಿಗ್ಗೆ ಋತ್ವಿಜರಿಂದ ಶ್ರೀ ನರಸಿಂಹ ಮಂತ್ರ ಹೋಮ, ಬಳಿಕ ಡಾ. ಉಡುಪಿ ರಾಮನಾಥ ಆಚಾರ್ಯರ ಮಾರ್ಗದರ್ಶನದಲ್ಲಿ ಯಜುರುಪಾಕರ್ಮ- ತಪ್ತ ಮುದ್ರಾ ಧಾರಣೆ, ಮಹಾಪೂಜೆ ತೀರ್ಥ ಪ್ರಸಾದ ವಿತರಣೆ.​ ಸಂಜೆ 5.00: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ​. 


ದಿನಾಂಕ​:10-08-2025​; ಬೆಳಗ್ಗೆ 10.00: ಋತ್ವಿಜರಿಂದ ತತ್ವಾಭಿಮಾನಿ ದೇವತಾ ಮಂತ್ರಗಳಿಂದ ವಿಶೇಷ ಹೋಮ - ರಾಯರ ಆರಾಧನಾ ಮಹಾಪೂಜೆ 12.30ಕ್ಕೆ ತೀರ್ಥ ಪ್ರಸಾದ​, ಸಂಜೆ ಗಂಟೆ 4.00ಕ್ಕೆ ತತ್ವ ಪ್ರದೀಪ ಧ್ಯಾನ ಮಂದಿರ ಉದ್ಘಾಟನೆ - ಡಾ| ನಿ.ಬೀ ವಿಜಯ ಬಲ್ಲಾಳರಿಂದ ಸಂಜೆ 5.00ಕ್ಕೆ ಧಾರ್ಮಿಕ ಚಿಂತನೆ : ವಿದ್ವಾನ್ ಕೃಷ್ಣರಾಜ ಭಟ್ ಕುತ್ಪಾಡಿ ಇವರಿಂದ ಸಂಜೆ 6.00ರಿಂದ ಭಕ್ತಿ ಸಂಗೀತ - ಜ್ಞಾನ ದೇಗುಲ ಪ್ರಶಸ್ತಿ ಪುರಸ್ಕೃತ ಶ್ರೀಮತಿ ವಾರಿಜಾಕ್ಷಿ ಆರ್ ಭಟ್, ಅಂಬಲಪಾಡಿ ಮತ್ತು ಶಿಷ್ಯರಿಂದ, ಸಂಜೆ 7.15 ರಾತ್ರಿ ಪೂಜೆ - ಫಲಾಹಾರ ಪ್ರಸಾದ.


ದಿನಾಂಕ ​:11-08-2025 ಸೋಮವಾರ​; ಬೆಳಿಗ್ಗೆಯಿಂದ ರಾಯರ ಆರಾಧನೋತ್ಸವದ ಧಾರ್ಮಿಕ ವಿಧಿಗಳು ಮತ್ತು 12.30 ಕ್ಕೆ ತೀರ್ಥ ಪ್ರಸಾದ ಸಂಜೆ 5.00ಕ್ಕೆ ಧಾರ್ಮಿಕ ಚಿಂತನೆ - ವಿದ್ವಾನ್ ವಿಜಯಸಿಂಹಾಚಾರ್ಯ ತೋಟಂತಿಲ್ಲಾಯ ಬೆಂಗಳೂರು 6.00 ರಿಂದ ಭಕ್ತಿ ಸಂಗೀತ - ಶ್ರೀನಿವಾಸ ಪೆಜತ್ತಾಯ ಮತ್ತು ಬಳಗ ಉಡುಪಿ ಇವರಿಂದ 7.15 ರಾತ್ರಿ ಪೂಜೆ - ಫಲಾಹಾರ ಪ್ರಸಾದ.


ದಿನಾಂಕ​: 2-08-2025 ​:ಬೆಳಗ್ಗೆಯಿಂದ ರಾಯರ ಆರಾಧನೋತ್ಸವದ ಧಾರ್ಮಿಕ ವಿಧಿಗಳು ಮತ್ತು 12.30 ಕ್ಕೆ ತೀರ್ಥ ಪ್ರಸಾದ ಸಂಜೆ 5.30 ರಿಂದ ಭಕ್ತಿ ಸಂಗೀತ -  ಉಷಾ ಹೆಬ್ಬಾರ್ ಮತ್ತು ಬಳಗ, ಮಣಿಪಾಲ ಇವರಿಂದ 7.15 ರಾತ್ರಿ ಪೂಜೆ​ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  







Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!