ಅಯೋಧ್ಯೆಯ ತೀಡಿ ಬಜಾರ್ ಛೇದಕದಲ್ಲಿರುವ ಪ್ರಾಚೀನ ಬೃಹಸ್ಪತಿ ಕುಂಡವನ್ನು ರಾಜ್ಯ ಸರ್ಕಾರ ನವೀಕರಿಸಿದೆ. ಈ ಕುಂಡದಲ್ಲಿ ಮೂವರು ಶ್ರೇಷ್ಠ ದಕ್ಷಿಣ ಭಾರತದ ಸಂಗೀತಗಾರರಾದ ತ್ಯಾಗರಾಜ ಸ್ವಾಮಿಗಳು, ಪುರಂದರ ದಾಸ ಮತ್ತು ಅರುಣಾಚಲ ಕವಿ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಈ ಪ್ರತಿಮೆಗಳನ್ನು ಇಂದು ಬುಧವಾರ ಸಂಜೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅನಾವರಣಗೊಳಿಸಿದರು. ರಾಮ ಮಂದಿರ ಸಂಕೀರ್ಣದೊಳಗೆ ಕರ್ನಾಟಕದ ಕಲಾವಿದರಿಂದ ಕಲಾ ಪ್ರದರ್ಶನವೂ ನೆರವೇರಿತು.
ಅಯೋಧ್ಯೆಯ ಮಹಾನಗರಪಾಲಿಕೆ ಹಾಗೂ ಉ ಪ್ರ ರಾಜ್ಯ ಪ್ರವಾಸೋದ್ಯಮ ಇಲಾಖೆಗಳು ಈ ನಿರ್ಮಾಣವನ್ನು ಮಾಡಿವೆ.
0 ಕಾಮೆಂಟ್ಗಳು