ದಿನಾಂಕ :07-12-2025 ರಂದು ಹೊಸಬೆಳಕು ಸಂಸ್ಥೆಯ ಎರಡನೇ ಯೋಜನೆಯ ಕನಸಿನ ಕೂಸಾದ ವಿನೂತನ ಕಟ್ಟಡ ಕುಟೀರ ಇದರ ಲೋಕಾರ್ಪಣೆಯ ಕಾರ್ಯಕ್ರಮವು ಸಂಪನ್ನಗೊಂಡಿದ್ದು ಕುಟೀರದ ಒಳಗೆ ಸಮಾಜದಲ್ಲಿ ಜಾಗೃತಿ ಮೂಡಿಸುವಂತಹ ಮಣ್ಣಿನ ಕಲಾಕೃತಿಗಳು ಅಂತಾರಾಷ್ಟ್ರೀಯ ಕಲಾವಿದರಾದ ಶ್ರೀ ವೆಂಕಿ ಪಲಿಮಾರ್ ಇವರ ಕೈಚಳಕದಲ್ಲಿ ಮೂಡಿಬಂದಿರುತ್ತದೆ. ಉದ್ಘಾಟನೆಯನ್ನು ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಖ್ಯಾತ ಉದ್ಯಮಿಗಳಾದ ಬೋಳ ಶ್ರೀ ಪ್ರಶಾಂತ್ ಕಾಮತ್ ರವರು ನೆರವೇರಿಸಿದರು. ಕುಟೀರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಮುಖ್ಯ ಅತಿಥಿಗಳು ಮಕ್ಕಳಲ್ಲಿ ಸಾಮಾಜಿಕ ಹಾಗೂ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಶ್ಲಾಘನೀಯ ಎಂದರು. ಸಮಾಜದಲ್ಲಿ ಒಂದು ಸಣ್ಣ ಬದಲಾವಣೆ ತರುವ ಪ್ರಯತ್ನಕ್ಕೆ ಆಗಮಿಸಿದ್ದ ಎಲ್ಲ ಅತಿಥಿಗಳು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಹೊಸಬೆಳಕು ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ತನುಲಾ ಸಂಸ್ಥೆಯು ಬೆಳೆದು ಬಂದ ಬಗ್ಗೆ ಹಾಗೂ ಕುಟೀರದ ವೈಶಿಷ್ಟ್ಯವನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಬೈಲೂರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಶೆಟ್ಟಿ, ಕ್ರಿಯೇಟಿವ್ ಕಾಲೇಜ್ ನ ಸ್ಥಾಪಕರಾದ ಶ್ರೀ ಗಣಪತಿ ಭಟ್,ರಂಗಪ್ಪ ಕಿಣಿ, ಉದ್ಯಮಿಗಳು ಮುಂಬೈ.ಶ್ರೀ ವಿಕ್ರಮ್ ಹೆಗ್ಡೆ ,ಮಾಜಿ ಜಿಲ್ಲಾಪಂಚಾಯತ್ ಸದಸ್ಯರು. DR ಶಶಿಕಿರಣ್ ಆಚಾರ್, ಜಗದೀಶ್ ತೆಂಡೂಲ್ಕರ್, ಬಲರಾಮ ಭಟ್, ಶ್ರೀನಾಥ್ ಮಣಿಪಾಲ,ಯತೀಶ್ ಉಚ್ಚಿಲ ಇನ್ನಿತರರು ಉಪಸ್ಥಿತರಿದ್ದರು. ಟ್ರಸ್ಟಿ ಶ್ರೀಮತಿ ತನಿಕ ಕಾರ್ಯಕ್ರಮವನ್ನು ನಿರೂಪಿಸಿದರು,ಶ್ರೀ ಗೌರೀಶ್ ವಂದಿಸಿದರು.

0 ಕಾಮೆಂಟ್ಗಳು