ಉಡುಪಿ ಕಿದಿಯೂರು ಹೋಟೆಲಿನ ಅನಂತಶಯನ ಸಭಾಂಗಣದಲ್ಲಿ ಉಡುಪಿ ಸಿವಿಲ್ ಇಂಜಿನಿಯರ್ಸ್ ಎಸೋಸಿಯೇಶನ್ ಇಂಜಿನಿಯರ್ಸ್ ಸಮ್ಮಿಲನಕಾರ್ಯಕ್ರಮ ಜರಗಿತು.
ಉದ್ಘಾಟನೆಯನ್ನು ದೀಪ ಬೆಳಗಿಸಿ ಸರ್ಫಾ ಕೋಟ್ಸ್ ನ ರಿಜಿನಲ್ ಮ್ಯಾನೇಜರ್ ಶ್ರೀರಾಮಚರಣ ರೈ ಚಾಲನೆ ನೀಡಿ,ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಕೆ.ರಂಜನ್ ವಹಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಇಂಜಿನಿಯರ್ ಭರತ್ ಭೂಷಣ್ ಹಾಗೂ ಇಂಜಿನಿಯರ್ ಗಣೇಶ್ ಬೈಲೂರು, ಖಜಾಂಜಿ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಉಪಸ್ಥಿತರಿದ್ದರು.
ಪೈಂಟ್ ನ ಬಗ್ಗೆ ಆಧುನಿಕ ತಂತ್ರ ಜ್ಞಾನದ ಉತ್ತಮಮಾಹಿತಿಯನ್ನು ರಾಮಚರಣ್ ರೈ ನೀಡಿದರು. ಪ್ರಜ್ವಲ್, ರಾಘವೇಂದ್ರ ಸಹಕರಿಸಿದರು. ಕಾರ್ಯದರ್ಶಿ ಇಂಜಿನಿಯರ್ ಕೆ.ಹರೀಶ್ ಧನ್ಯವಾದವಿತ್ತರು. ಸ್ವಾತಿ ಆಚಾರ್ಯನಿರೂಪಿಸಿದರು. ಉಡುಪಿ ಪರಿಸರದ ನೂರಾರು ಇಂಜಿನಿಯರ್ಸ್ ಭಾಗವಹಿಸಿದ್ದರು

0 ಕಾಮೆಂಟ್ಗಳು