ಮದ್ವಜಯಂತಿ ~ಪ್ರಶಾಂತ ಕುಮಾರ್ ಮಟ್ಟು


 ಆನಂದ ತೀರ್ಥರು ಶ್ರೀಮಧ್ವ ಮುನಿಗಳು 

ದಾನವಾಂತಕನಿಗೆ ಪ್ರಿಯರಿವರು| 

ಶ್ರೀನಾಥನಿಗೆ ಅಷ್ಟಮಠವನ್ನು ರಚಿಸಿಹ  

ಜ್ಞಾನದ ಚಿಲುಮೆಯು ಮುನಿಶ್ರೇಷ್ಠರು||


ಈ ಜೀವರಿಂಗಿಹ ಅನುಭವ ಜಡಕಿಲ್ಲ 

ನೈಜವು ಜೀವ ಜೀವರ ಭೇದವು|

ಆ ಜಡ ಈಶ್ವರ ಭೇದವ ತಿಳಿಸಿಹ

ರಾಜೀವಲೋಚನನಿಗೆ ಭಕ್ತರು||  


ಕೋಪವ ಗೆದ್ದಿಹ ಸಜ್ಜನ ಬಂಧುವು 

ತಾಪವ ಕಳೆಯುವ ಯತಿವರ್ಯರು|

ಗೋಪಿಚಂದನದಿ ಮುಚ್ಚಿದ್ದ ಶ್ರೀಕೃಷ್ಣನ 

ರೂಪಾತಿಶಯವನ್ನು ಕಂಡವರು||


ಭಾಷ್ಯವ ರಚಿಸಿ ಸಜ್ಜನರನು ಕಾಯ್ದಿಹ 

ಶಿಷ್ಯ ಕೋಟಿಗೆ ಮಾರ್ಗದರ್ಶಕರು|

ದೃಶ್ಯದ ಮಾಯೆಯ ಜಾಲವ ಸೀಳಿದ

ವಶ್ಯಯೋಗಾಚಾರ್ಯ ಯತಿರಾಜರು||


ಹರಿಸರ್ವೋತ್ತಮ ವಾಯು ಜೀವೋತ್ತಮವು ಎಂದ 

ಗುರುಗಳು ಭೂಸುರ ಪುಂಗವರು|  

ವರಸುಪ್ರಶಾಂತನ ರಜತ ಪೀಠಕೆ ತಂದ 

ಮರುದಂಶ ಪೂರ್ಣಪ್ರಜ್ಞರು ರಾಯರು||


✍  ಪ್ರಶಾಂತ ಕುಮಾರ್ ಮಟ್ಟು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು