ಪ್ರಸಾದ್ ನೇತ್ರಾಲಯ- ಉಪ ನೋ೦ದಣಾಧಿಕಾರಿಯವರ ಕಚೇರಿಗೆ ಗಾಲಿಕುರ್ಚಿ ಕೊಡುಗೆ

ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ- ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ತ್ ವತಿಯಿ೦ದ ಉಡುಪಿಯ ಉಪ ನೋ೦ದಣಾಧಿಕಾರಿಯವರ ಕಚೇರಿಗೆ ಗಾಲಿಕುರ್ಚಿಯನ್ನು ನೀಡಲಾಯಿತು. ಈ ಕಚೇರಿಗೆ ಬರುವ ಹಿರಿಯ ನಾಗರಿಕರ ಮತ್ತು ನಡೆಯಲಸಾಧ್ಯವಾದ ನಾಗರಿಕರ ಅನುಕೂಲತೆಗಾಗಿ ಈ ಗಾಲಿಕುರ್ಚಿಯನ್ನು ಹಿರಿಯ ಉಪನೋoದಣಾಧಿಕಾರಿಯವರಾದ ಶ್ರೀ ಎo. ಗಿರೀಶ್‌ರವರಿಗೆ ಪ್ರಸಾದ್ ನೇತ್ರಾಲಯದ ಮುಖ್ಯ ಆಡಳಿತಾಧಿಕಾರಿ ಶ್ರೀ ಎo. ವಿ. ಆಚಾರ್ಯರವರು ಹಸ್ತಾoತರಿಸಿದರು. ಹಿರಿಯ ನ್ಯಾಯವಾದಿ ಶ್ರೀ ಉಮೇಶ್ ಶೆಟ್ಟಿ ಕಳತ್ತೂರು ಅವರು ಉಪಸ್ಥಿತರಿದ್ದರು. ಈ ದೇಣಿಗೆಗಾಗಿ ಹಿರಿಯ ಉಪನೋ೦ದಣಾಧಿಕಾರಿಯವರು ಪ್ರಸಾದ್ ನೇತ್ರಾಲಯಕ್ಕೆ ಧನ್ಯವಾದ ಹೇಳಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು