BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಅಪರಾಧ

ಬ್ರಹ್ಮಾವರ : 1 ತಿಂಗಳ ಹೆಣ್ಣು ಮಗು ಮಾರಾಟ; ಇಬ್ಬರ ಬಂಧನ!

 

• ದಿನಾಂಕ:19/06/2026 ರಂದು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯ ವಲಯ ಮೇಲ್ವಿಚಾರಕರು ಮಕ್ಕಳ ರಕ್ಷಣಾ ಘಟಕಕ್ಕೆ ದೂರವಾಣಿ ಕರೆ ಮಾಡಿ ಉಡುಪಿ ತಾಲೂಕಿನ ಸಂತೆಕಟ್ಟೆ ನೇಜಾರು ಇಲ್ಲಿನ ದಂಪತಿಗಳಾದ ಪ್ರಕಾಶ್‌ ಹಾಗೂ ಪೂರ್ಣಿಮಾ ಎಂಬವರು ಸುಮಾರು 1 ತಿಂಗಳ ಹೆಣ್ಣು ಮಗುವನ್ನು ತಂದು ಯಾವುದೇ ಕಾನೂನಾತ್ಮಕ ಪ್ರತಿಕ್ರಿಯೆಗಳಿಲ್ಲದೆ ಅನಧಿಕೃತವಾಗಿ ಸಾಕುತ್ತಿದ್ದಾರೆ ಎಂಬ ಮಾಹಿತಿ ನೀಡಿರುತ್ತಾರೆ. 

• ಅದರಂತೆ ಪಿರ್ಯಾದಿ ರಕ್ಷಣಾಧಿಕಾರಿ (ಅಸಾಂಸ್ಥಿಕ) ಮಕ್ಕಳ ರಕ್ಷಣಾ ಘಟಕ, ಉಡುಪಿರವರು ಹಾಗೂ ರಕ್ಷಣಾಧಿಕಾರಿ (ಅಸಾಂಸ್ಥಿಕ-2) ಹಾಗೂ ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯ ವಲಯ ಮೇಲ್ವಿಚಾರಕರೊಂದಿಗೆ ದಿನಾಂಕ: 19/06/2026 ರಂದು ಸದ್ರಿ ದಂಪತಿಗಳು ವಾಸವಿರುವ ಸಂತೆಕಟ್ಟೆಯ ಸುಬ್ರಮಣ್ಯ ನಗರ ಮನೆಗೆ ಭೇಟಿ ನೀಡಿದಾಗ ಶ್ರೀಮತಿ ಪೂರ್ಣಿಮಾ, ಪ್ರಕಾಶ್‌, 1 ತಿಂಗಳ ಹೆಣ್ಣು ಮಗು ಶ್ರೀನಿಕಾ ಪ್ರಕಾಶ್‌ ಹಾಗೂ ಪೂರ್ಣಿಮಾ ರವರ ಅಕ್ಕ ಲಕ್ಷ್ಮಿರವರು ಮನೆಯಲ್ಲಿ ಹಾಜರಿದ್ದು, ಆರೋಪಿತರು ಅನುಮಾನಾಸ್ಪದ ಹೇಳಿಕೆ ನೀಡಿರುತ್ತಾರೆ. 

• ಈ ಬಗ್ಗೆ ಕೂಲಂಕುಷವಾಗಿ ವಿಚಾರಿಸಲಾಗಿ ಎಸ್‌ ಪ್ರಕಾಶ್‌ ಮತ್ತು ಪೂರ್ಣಿಮಾ ರವರಿಗೆ ಮದುವೆಯಾಗಿ 11 ವರ್ಷಗಳಾದರೂ ಮಕ್ಕಳಾಗದೇ ಇದ್ದ ಕಾರಣ ಉಡುಪಿ ಕಾಮತ್‌ ನರ್ಸಿಂಗ್‌ ಹೋಮ್‌ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. 

• ಆ ಸಂದರ್ಭದಲ್ಲಿ ಲಕ್ಷ್ಮಿ ಇವರ ಸ್ನೇಹಿತರಿಂದ ಉಡುಪಿ ಕಾಮತ್‌ ನರ್ಸಿಂಗ್‌ ಹೋಮ್‌ ನಲ್ಲಿ ಮಗು ಇರುವ ವಿಚಾರ ತಿಳಿದು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಾದ ಆರೋಪಿತ ಡಾ ಕೆ.ಸುರೇಂದ್ರ ಕಾಮತ್‌ ಇವರ ಬಳಿ ಎಸ್‌ ಪ್ರಕಾಶ್‌ ಮತ್ತು ಪೂರ್ಣಿಮಾರವರು ಮಗುವನ್ನು ನೀಡುವಂತೆ ಕೇಳಿಕೊಂಡಿರುತ್ತಾರೆ. 

• ಈ ಬಗ್ಗೆ ಆರೋಪಿತ ಡಾ ಕೆ.ಸುರೇಂದ್ರ ಕಾಮತ್‌ ಒಪ್ಪಿ 1 ತಿಂಗಳ ಹಿಂದೆ ಹೆಣ್ಣು ಮಗುವನ್ನು ಎಸ್‌ ಪ್ರಕಾಶ್‌ ಮತ್ತು ಪೂರ್ಣಿಮಾ ಕೊಟ್ಟು ಆರೋಪಿತರಿಗೆ ಕೊಟ್ಟು ಮಗುವಿನ ಜನನ ಪ್ರಮಾಣ ಪತ್ರ ಮಾಡಿಕೊಟ್ಟಿರುತ್ತಾರೆ. 

• ನಂತರ ಮಗುವಿನ ಜನನ ಪ್ರಮಾಣ ಪತ್ರ ಉಡುಪಿ ನಗರ ಸಭೆಯಲ್ಲಿ ಪಡೆದಿರುವುದಾಗಿ ಹಾಗೂ ಮಗುವಿನ ಜೈವಿಕ ಪೋಷಕರು ಯಾರು ಎಂದು ತಿಳಿದಿರುವುದಿಲ್ಲ ಹಾಗೂ ಮಗುವಿನ ಬಗ್ಗೆ ಯಾವುದೇ ಮಾಹಿತಿಗಳು ತಿಳಿದಿಲ್ಲವಾಗಿ ತಿಳಿಸಿರುತ್ತಾರೆ. 

• ಆರೋಪಿತರುಗಳು ಅಕ್ರಮ ಲಾಭ ಗಳಿಸುವ ಸಮಾನ ಉದ್ದೇಶದಿಂದ ಒಳಸಂಚು ರೂಪಿಸಿ ಮಗುವಿನ ಜನನ ಪ್ರಮಾಣ ಹಾಗೂ ತಂದೆ ತಾಯಿಯ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮಗುವನ್ನು ಕಳ್ಳ ಸಾಗಾಣಿಕೆಯ ಮೂಲಕ ಮಾರಾಟ ಮಾಡಿರುವಂತಹ ಕೃತ್ಯ ವೆಸಗಿರುತ್ತಾರೆ. 

• ಆದುದರಿಂದ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ನೀಡಿದ ದೂರಿನಂತೆ ಮಹಿಳಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 41/2026 ಕಲಂ: 143(4), 61, 318(2) ಜೊತೆಗೆ 3(5) BNS Act & 81 JJ Act.ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

• ಈ ಪ್ರಕರಣದ ಆರೋಪಿಗಳಾದ 1) ಡಾ ಕೆ.ಸುರೇಂದ್ರ ಕಾಮತ್‌(76), ತಂದೆ: ಉಪೇಂದ್ರ ಕಾಮತ್‌, ಬನ್ನಂಜೆ, ಉಡುಪಿ. (ವೈದ್ಯರು ಉಡುಪಿ ಕಾಮತ್‌ ನರ್ಸಿಂಗ್‌ ಹೋಮ್‌, ಉಡುಪಿ) ಮತ್ತು 2) ಎಸ್.‌ ಪ್ರಕಾಶ್‌(50), ತಂದೆ: ಶಿವ, ರಾಜೀವನಗರ, ನೇಜಾರು ಸಂತೆಕಟ್ಟೆ, ಮೂಡುತೋನ್ಸೆ ಗ್ರಾಮ, ಉಡುಪಿ ಇವರುಗಳನ್ನು ದಸ್ತಗಿರಿ ಮಾಡಲಾಗಿದೆ.

• ಉಳಿದ ಎರಡು ಅಪರಾಧಿಗಳ ದಸ್ತಗಿರಿಗೆ ಬಾಕಿ ಇರುತ್ತದೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!