• ದಿನಾಂಕ:19/06/2026 ರಂದು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯ ವಲಯ ಮೇಲ್ವಿಚಾರಕರು ಮಕ್ಕಳ ರಕ್ಷಣಾ ಘಟಕಕ್ಕೆ ದೂರವಾಣಿ ಕರೆ ಮಾಡಿ ಉಡುಪಿ ತಾಲೂಕಿನ ಸಂತೆಕಟ್ಟೆ ನೇಜಾರು ಇಲ್ಲಿನ ದಂಪತಿಗಳಾದ ಪ್ರಕಾಶ್ ಹಾಗೂ ಪೂರ್ಣಿಮಾ ಎಂಬವರು ಸುಮಾರು 1 ತಿಂಗಳ ಹೆಣ್ಣು ಮಗುವನ್ನು ತಂದು ಯಾವುದೇ ಕಾನೂನಾತ್ಮಕ ಪ್ರತಿಕ್ರಿಯೆಗಳಿಲ್ಲದೆ ಅನಧಿಕೃತವಾಗಿ ಸಾಕುತ್ತಿದ್ದಾರೆ ಎಂಬ ಮಾಹಿತಿ ನೀಡಿರುತ್ತಾರೆ.
• ಅದರಂತೆ ಪಿರ್ಯಾದಿ ರಕ್ಷಣಾಧಿಕಾರಿ (ಅಸಾಂಸ್ಥಿಕ) ಮಕ್ಕಳ ರಕ್ಷಣಾ ಘಟಕ, ಉಡುಪಿರವರು ಹಾಗೂ ರಕ್ಷಣಾಧಿಕಾರಿ (ಅಸಾಂಸ್ಥಿಕ-2) ಹಾಗೂ ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯ ವಲಯ ಮೇಲ್ವಿಚಾರಕರೊಂದಿಗೆ ದಿನಾಂಕ: 19/06/2026 ರಂದು ಸದ್ರಿ ದಂಪತಿಗಳು ವಾಸವಿರುವ ಸಂತೆಕಟ್ಟೆಯ ಸುಬ್ರಮಣ್ಯ ನಗರ ಮನೆಗೆ ಭೇಟಿ ನೀಡಿದಾಗ ಶ್ರೀಮತಿ ಪೂರ್ಣಿಮಾ, ಪ್ರಕಾಶ್, 1 ತಿಂಗಳ ಹೆಣ್ಣು ಮಗು ಶ್ರೀನಿಕಾ ಪ್ರಕಾಶ್ ಹಾಗೂ ಪೂರ್ಣಿಮಾ ರವರ ಅಕ್ಕ ಲಕ್ಷ್ಮಿರವರು ಮನೆಯಲ್ಲಿ ಹಾಜರಿದ್ದು, ಆರೋಪಿತರು ಅನುಮಾನಾಸ್ಪದ ಹೇಳಿಕೆ ನೀಡಿರುತ್ತಾರೆ.
• ಈ ಬಗ್ಗೆ ಕೂಲಂಕುಷವಾಗಿ ವಿಚಾರಿಸಲಾಗಿ ಎಸ್ ಪ್ರಕಾಶ್ ಮತ್ತು ಪೂರ್ಣಿಮಾ ರವರಿಗೆ ಮದುವೆಯಾಗಿ 11 ವರ್ಷಗಳಾದರೂ ಮಕ್ಕಳಾಗದೇ ಇದ್ದ ಕಾರಣ ಉಡುಪಿ ಕಾಮತ್ ನರ್ಸಿಂಗ್ ಹೋಮ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
• ಆ ಸಂದರ್ಭದಲ್ಲಿ ಲಕ್ಷ್ಮಿ ಇವರ ಸ್ನೇಹಿತರಿಂದ ಉಡುಪಿ ಕಾಮತ್ ನರ್ಸಿಂಗ್ ಹೋಮ್ ನಲ್ಲಿ ಮಗು ಇರುವ ವಿಚಾರ ತಿಳಿದು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಾದ ಆರೋಪಿತ ಡಾ ಕೆ.ಸುರೇಂದ್ರ ಕಾಮತ್ ಇವರ ಬಳಿ ಎಸ್ ಪ್ರಕಾಶ್ ಮತ್ತು ಪೂರ್ಣಿಮಾರವರು ಮಗುವನ್ನು ನೀಡುವಂತೆ ಕೇಳಿಕೊಂಡಿರುತ್ತಾರೆ.
• ಈ ಬಗ್ಗೆ ಆರೋಪಿತ ಡಾ ಕೆ.ಸುರೇಂದ್ರ ಕಾಮತ್ ಒಪ್ಪಿ 1 ತಿಂಗಳ ಹಿಂದೆ ಹೆಣ್ಣು ಮಗುವನ್ನು ಎಸ್ ಪ್ರಕಾಶ್ ಮತ್ತು ಪೂರ್ಣಿಮಾ ಕೊಟ್ಟು ಆರೋಪಿತರಿಗೆ ಕೊಟ್ಟು ಮಗುವಿನ ಜನನ ಪ್ರಮಾಣ ಪತ್ರ ಮಾಡಿಕೊಟ್ಟಿರುತ್ತಾರೆ.
• ನಂತರ ಮಗುವಿನ ಜನನ ಪ್ರಮಾಣ ಪತ್ರ ಉಡುಪಿ ನಗರ ಸಭೆಯಲ್ಲಿ ಪಡೆದಿರುವುದಾಗಿ ಹಾಗೂ ಮಗುವಿನ ಜೈವಿಕ ಪೋಷಕರು ಯಾರು ಎಂದು ತಿಳಿದಿರುವುದಿಲ್ಲ ಹಾಗೂ ಮಗುವಿನ ಬಗ್ಗೆ ಯಾವುದೇ ಮಾಹಿತಿಗಳು ತಿಳಿದಿಲ್ಲವಾಗಿ ತಿಳಿಸಿರುತ್ತಾರೆ.
• ಆರೋಪಿತರುಗಳು ಅಕ್ರಮ ಲಾಭ ಗಳಿಸುವ ಸಮಾನ ಉದ್ದೇಶದಿಂದ ಒಳಸಂಚು ರೂಪಿಸಿ ಮಗುವಿನ ಜನನ ಪ್ರಮಾಣ ಹಾಗೂ ತಂದೆ ತಾಯಿಯ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮಗುವನ್ನು ಕಳ್ಳ ಸಾಗಾಣಿಕೆಯ ಮೂಲಕ ಮಾರಾಟ ಮಾಡಿರುವಂತಹ ಕೃತ್ಯ ವೆಸಗಿರುತ್ತಾರೆ.
• ಆದುದರಿಂದ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 41/2026 ಕಲಂ: 143(4), 61, 318(2) ಜೊತೆಗೆ 3(5) BNS Act & 81 JJ Act.ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
• ಈ ಪ್ರಕರಣದ ಆರೋಪಿಗಳಾದ 1) ಡಾ ಕೆ.ಸುರೇಂದ್ರ ಕಾಮತ್(76), ತಂದೆ: ಉಪೇಂದ್ರ ಕಾಮತ್, ಬನ್ನಂಜೆ, ಉಡುಪಿ. (ವೈದ್ಯರು ಉಡುಪಿ ಕಾಮತ್ ನರ್ಸಿಂಗ್ ಹೋಮ್, ಉಡುಪಿ) ಮತ್ತು 2) ಎಸ್. ಪ್ರಕಾಶ್(50), ತಂದೆ: ಶಿವ, ರಾಜೀವನಗರ, ನೇಜಾರು ಸಂತೆಕಟ್ಟೆ, ಮೂಡುತೋನ್ಸೆ ಗ್ರಾಮ, ಉಡುಪಿ ಇವರುಗಳನ್ನು ದಸ್ತಗಿರಿ ಮಾಡಲಾಗಿದೆ.
• ಉಳಿದ ಎರಡು ಅಪರಾಧಿಗಳ ದಸ್ತಗಿರಿಗೆ ಬಾಕಿ ಇರುತ್ತದೆ.

0 ಕಾಮೆಂಟ್ಗಳು