ಮಣಿಪಾಲದ ಈಶ್ವರ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿ ಅಪಘಾತಪಡಿಸಿದ ವ್ಯಕ್ತಿಗೆ ನ್ಯಾಯಾಂಗ ಬಂಧನ

ದಿನಾಂಕ:19.06.2026 ರಂದು ಪಿರ್ಯಾಧಿದಾರರಾದ ಅಭಿಷೇಕ್ ನಾಯಕ್ (21) ತಂದೆ: ಶಿವರಾಮ್ ನಾಯಕ್, ತೋಟದ ಮನೆ, ಕರ್ವಾಲು, ಅಲೆವೂರು ಗ್ರಾಮ ಉಡುಪಿ ತಾಲೂಕು ಉಡುಪಿ ಜಿಲ್ಲೆ ಇವರು ತಮ್ಮ ಬಾಬು KA20HE5260ನೇ ಸ್ಕೂಟಿಯಲ್ಲಿ ಕಾರ್ಯನಿಮಿತ್ತ ಮಣಿಪಾಲಕ್ಕೆ ಬಂದು ವಾಪಾಸ್ಸು ಕೆಳಪರ್ಕಳದಲಿರುವ ಮನೆಗೆ ಹೋಗುವರೇ NH 169(A) ರಲ್ಲಿ. ಮಣಿಪಾಲದ ಸಾಯಿಸಾಗರ್ ಹೋಟೇಲ್ ನ ಮುಂದೆ ಯು ಟರ್ನ ರಸ್ತೆ ಬಳಿ ತಲುಪುವಾಗ ಸಮಯ ಸುಮಾರು ರಾತ್ರಿ 10.08 ಗಂಟೆಗೆ ಮಣಿಪಾಲದ ಎಂಐಟಿ ಕಡೆಯಿಂದ ಆರೋಪಿತನಾದ ಸಮೇಗ್ದ್ ಎಲ್ ಜೆ ಪ್ರಾಯ 25ವರ್ಷ ವಾಸ: ಮುಡಾರು ಕಾರ್ಕಳ ಈತನು ಮದ್ಯಪಾನ ಮಾಡಿಕೊಂಡು ತನ್ನ ಕಾರನ್ನು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಭಿಷೇಕ್ ನಾಯಕ್‌ರವರ ಸ್ಕೂಟಿ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಎರಡು ವಾಹನಗಳು ಜಖಂಗೊಂಡು, ಅಭಿಷೇಕ್ ನಾಯಕ್ ರವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ KA19 ΜΕ 8833 ನೇದರ ಚಾಲಕನು ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿ ಅಪಘಾತ ಪಡಿಸಿದ್ದು ಗಂಭೀರ ಸ್ವರೂಪದ ಗಾಯಗಳಾಗಿರುತ್ತವೆ, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 99/2026 ಕಲಂ: 281,125(a), 110 BNS ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿ ಇರುತ್ತದೆ.

ದಿನಾಂಕ: 22.06.2026 ರಂದು ಸದ್ರಿ ಆರೋಪಿತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು