ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ. ಟ್ರಸ್ಟ್ (ರಿ). ಉಡುಪಿ ತಾಲೂಕು ಅಂಬಲಪಾಡಿ ವಲಯದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

 


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ. ಟ್ರಸ್ಟ್ (ರಿ). ಉಡುಪಿ ತಾಲೂಕು ಅಂಬಲಪಾಡಿ ವಲಯದ ಶ್ಯಾಮಿಲಿ ಪದವಿ ಪೂರ್ವ ಕಾಲೇಜ್ ಕಿದಿ ಯೂರ ಇಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವನ್ನು ಅಂಬಲಪಾಡಿ ವಲಯ ಜನ ಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಮಹೇಶ್ ಕುಮಾರ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. 

ಕಾಲೇಜ್ ಪ್ರಾಂಶುಪಾಲರುರಾದ ಶ್ರೀ ನಾಗರಾಜ್ ವೈದ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. 

ಸಂಪನ್ಮೂಲ ವ್ಯಕ್ತಿಯವರಾದ Dr.ಶ್ರೀ ವಿರೂಪಕ್ಷ ದೇವರ ಮನೆ ಮನೋರೋಗ ತಜ್ಞರು, A. V. ಬಾಳಿಗಾ ಆಸ್ಪತ್ರೆ ಉಡುಪಿ ಇವರು ವಿದ್ಯಾರ್ಥಿಗಳಿಗೆ ಮಾದಕ ವಸ್ತುವಿನ್ನಲಿರುವ ಅಪಾಯಕಾರಿ ರಾಸಾಯನಿಕ ವಸ್ತುಗಳ ಬಗ್ಗೆ ತಿಳಿಸಿ ಅದು ಆರೋಗ್ಯ್ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರುತ್ತೆಎನ್ನುವುದರ್ ಬಗ್ಗೆಮಾಹಿತಿ ತಿಳಿಸಿ ಕೊಟ್ಟರು ಹಾಗೂ ಉತ್ತಮ ಆರೋಗ್ಯ್ ಕುರಿತು ಮಾಹಿತಿ ನೀಡಿದರು. ಈ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದ ಜನ ಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗ ಮ್ಯಾನ್ ಯೋಜನಾಧಿಕಾರಿಗಳಾದ ಶ್ರೀ ಗಣೇಶ್ ಆಚಾರ್ಯ ಇವರು ಸ್ವಸ್ತ್ಯ ಸಮಾಜ ನಿರ್ಮಾಣ ದಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ,ಉತ್ತಮ ಸ್ನೇಹಿತಆಯ್ಕೆ, ಮಾದಕ ವ್ಯಾಸನ ದಿದ್ದ ಮನೆಯಲ್ಲಿ ಬಡತನ, ಆರ್ಥಿಕ ಸಂಕಷ್ಟ, ಕಲಹ ದ್ವೇಷ ಸಮಸ್ಯೆಗಳು ನಿರ್ಮಾಣ ವಾಗಿ ಜೀವನ ಅಸ್ತ ವೇಸ್ತಾ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಸ್ವಾಸ್ತ್ಯ ಸಂಕಲ್ಪ ದ ಪ್ರಮಾಣ ವಚನ ಮಾಡಿಸಿದರು ಕಾಲೇಜ್ ಪ್ರಾಂಶುಪಾಲರು ಶ್ರೀ ನಾಗರಾಜ್ sr ವಾರು ಈ ಒಂದು ಕಾರ್ಯಕ್ರಮ ಅತ್ಯುತ್ತಮ ಕಾರ್ಯಕ್ರಮ ವಾಗಿದ್ದು ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಕೊಳ್ಳಬಹುದು ಎಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಜಿಲ್ಲಾ ಜನ ಜಾಗೃತಿ ಸದಸ್ಯರಾದ ಶ್ರೀ ಶಿವಕುಮಾರ್, ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿ, ಒಕ್ಕೂಟ ಅಧ್ಯಕ್ಷರು. ಪದಾಧಿಕಾರಿಗಳು ಕಾಲೇಜು ವಿದ್ಯಾರ್ಥಿಗಳು ಶಿಕ್ಷಕರ ವೃಂದ ವಾರು ಉಪಸ್ಥಿತರಿದ್ದರು..

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು