ಉಡುಪಿ: ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕ ಸಂಸ್ಕೃತಸ್ನಾತಕಸ್ನಾತಕೋತ್ತರಾಧ್ಯಯನಕೇಂದ್ರದಲ್ಲಿ ಶ್ರೀರಾಜಾರಾಮ್ ಚೆನ್ನೈ, ಶ್ರೀಸುಬ್ಬಯ್ಯ ಶೆಟ್ಟಿ ಮುಂಬೈ, ವಿ.ಪ್ರಸನ್ನ ಆಚಾರ್ಯ ಪುತ್ತಿಗೆ ಮಠ ಇವರ ದತ್ತಿನಿಧಿಯ ಪ್ರಾಯೋಜಕತ್ವದಲ್ಲಿ ನಡೆದ ಕಾವ್ಯಶಾಸ್ತ್ರವಿಚಾರಪರಿಷತ್ ನ ಪ್ರಥಮ ವಿಚಾರ ಸಂಕಿರಣಲ್ಲಿ "ವೇದಾಂತೇ ವೃತ್ತ್ಯಾದಿಸ್ವರೂಪವಿಮರ್ಶಃ" ಎಂಬ ವಿಷಯದ ಕುರಿತಾಗಿ ಉಪನ್ಯಾಸವನ್ನು ನೀಡಿದ ಮೈಸೂರಿನ ಡಾ. ಶ್ರೀನಿವಾಸಮೂರ್ತಿ ಆಚಾರ್ಯರು "ಎಲ್ಲಾ ಶಬ್ದಗಳಿಂದಲೂ, ಅಕ್ಷರಗಳಿಂದಲೂ ಪ್ರತಿಪಾದಿತನಾದವನು ಪದ್ಮನಾಭ. ಮುಖ್ಯ ವೃತ್ತಿಯ ಮೂಲಕ ಲೌಕಿಕವಾದ ಅರ್ಥವು ಪ್ರತಿಪಾದಿತವಾದರೂ ಪರಮಮುಖ್ಯವೃತ್ತಿಯಲ್ಲಿ ಎಲ್ಲವೂ ಭಗವದ್ವಾಚಕ ಪದಗಳೇ ಆಗಿವೆ" ಎಂಬ ಆಚಾರ್ಯ ಮಧ್ವರ ಸಿದ್ಧಾಂತವನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಡಾ. ಡಿ.ಎಸ್ ಅಮೃತೇಶ ಆಚಾರ್ಯರು ವಿದ್ಯಾರ್ಥಿಗಳನ್ನು ಕುರಿತು ಹಿತನುಡಿಗಳನ್ನಾಡಿದರು. ಕಾವ್ಯಶಾಸ್ತ್ರವಿಚಾರಪರಿಷತ್ ನ ಸಂಚಾಲಕರಾದ ಡಾ. ಅಜಿತ ಕುಮಾರ ಆಚಾರ್ಯರು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸುಮುಖ ಅಡಿಗ ಧನ್ಯವಾದಗೈದರು. ಕು. ಸುದೀಕ್ಷಾ ಪ್ರಾರ್ಥಿಸಿದರು.
ಕು. ಐಶ್ವರ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

0 ಕಾಮೆಂಟ್ಗಳು