ಮುಕುಂದ ಕೃಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸ್ಥಾಪಕರ ದಿನಾಚರಣೆ

ಮುಕುಂದ ಕೃಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸ್ಥಾಪಕರ ದಿನಾಚರಣೆ ಅದ್ದೂರಿಯಿಂದ ಜರುಗಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ್ ಇದರ ಆಡಳಿತ ಅಧಿಕಾರಿ ಡಾಕ್ಟರ್ ಕೆ ಶ್ರೀಧರ್ ರಂಗನಾಥ್ ಪೈ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಡಾಕ್ಟರ್ ಟಿ. ಎಂ. ಎ ಪೈ ಮಹಾನ್ ಸಾಧಕರಾಗಿದ್ದಾರೆ, ಮಕ್ಕಳು ಅವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು. ಮುಖ್ಯ ಅತಿಥಿಗಳಾದ ಡಾಕ್ಟರ್ ಎಮ್ ಎ ಪೈ ಕಾಲೇಜ್ ಆಫ್ ಎಜುಕೇಶನ್ ಉಡುಪಿ ಇದರ ಸಮನ್ವಯಾಧಿಕಾರಿಗಳಾದ ಡಾಕ್ಟರ್ ಮಹಾಬಲೇಶ್ವರ ಅವರು ಡಾಕ್ಟರ್ ತೋನ್ಸೆ ಮಾಧವ ಅನಂತ ಪೈ ದೂರ ದರ್ಶಿತ್ವ ಉಳ್ಳ ಓರ್ವ ಮಹಾನ್ ಸಾಧಕರು, ಮಕ್ಕಳೆಲ್ಲರೂ ಅವರ ಅವರ ಚಿಂತನೆಗಳನ್ನು ಅರಿತು ಜೀವನವನ್ನು ಸಫಲಗೊಳಿಸಬೇಕು , ಎಂದು ಕಿವಿ ಮಾತನ್ನು ಹೇಳಿದರು. ಶಾಲಾ ಮುಖ್ಯೋಪಾ ಧ್ಯಾಯಿನಿ ಶ್ರೀಮತಿ ವಿನುತಾ ಎಸ್ ನಾಯಕ್ ಆಗಮಿಸಿದ ಸರ್ವರನ್ನು ಸ್ವಾಗತಿಸಿದರು, ಶಾಲಾ ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷ ಶ್ರೀ ಗಣೇಶ Shenoy ಶುಭ ಹಾರೈಸಿದರು. ಶ್ರೀಮತಿ ವಿದ್ಯಾಲಕ್ಷ್ಮಿ ಸಂಸ್ಥಾಪಕರ ಕುರಿತು ಮಾಹಿತಿ ಇತ್ತರು,ಶಾಲಾ ಶಿಕ್ಷಕಿಯರಾ ದ ಶ್ರೀಮತಿ ಸೌಮ್ಯ ಹಾಗೂ ಹರ್ಷಿಣಿ ಕಾರ್ಯಕ್ರಮ ಸಂಯೋಜಿಸಿದ್ದರು, ಶ್ರೀಮತಿ ಜಯಲಕ್ಷ್ಮಿ ಅತಿಥಿಗಳನ್ನು ಪರಿಚಯಿಸಿದರು, ಶ್ರೀಮತಿ ಗೀತಾ ಬಹುಮಾನ ವಿಜೇತರ ಪಟ್ಟಿಯನ್ನು ಓದಿದರು ಶ್ರೀಮತಿ ವೀಣಾ ಕಾಮತ್ ವಂದಿಸಿದರು. ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರುಗಿತು. ಶಾಲೆಯಲ್ಲಿ ಸೇವೆ ಸಲ್ಲಿಸಿದ ಹಿಂದಿನ ಮುಖ್ಯೋಪಾಧ್ಯಾಯನ ಯವರು,ಶಿಕ್ಷಕಿಯರು, ಶಾಲಾ ಹಿತೈಷಿಗಳು, ಪೋಷಕರು, ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು