ಈ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಆಗಸ್ಟ್ 15 ರಂದು ಉಡುಪಿಯ ಇಂಚರ ಸರ್ಜಿಕಲ್ ಕ್ಲಿನಿಕ್ ನಲ್ಲಿ ಮುಂಚಿತವಾಗಿ ನೊಂದಾಯಿಸಿದ ಐವತ್ತು ಜನ ಮಧುಮೇಹ ರೋಗಿಗಳಿಗೆ ಉಚಿತವಾಗಿ ಪಾದರಕ್ಷೆಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಶ್ರೀ ವೈ ಎಲ್ ಎನ್ ಜೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇವರ ಪ್ರಾಯೋಜಕತ್ವದಲ್ಲಿ ನಡೆಸಲಾಗುತ್ತಿದೆ.
ಜೊತೆಗೆ ಆಸಕ್ತರಿಗೆ ರಿಯಾಯಿತಿ ದರದಲ್ಲಿ ಕಾಮಾಲೆ ರೋಗ (Hepatitis A and B) ನಿರೋಧಕ ಚುಚ್ಚುಮದ್ದು ನೀಡುವ ಕಾರ್ಯಕ್ರಮವನ್ನು ಹಾಗೂ ಉಚಿತ ಎಲುಬು ಸಾಂದ್ರತೆ (bone density)ಪರೀಕ್ಷೆ ಹಾಗೂ ಮಧುಮೇಹ ರೋಗಿಗಳ ಪಾದಗಳ ನರಪರೀಕ್ಷೆಯನ್ನು (neuropathy test) ಸಹ ಅಂದು ನಡೆಸಲಾಗುವುದು ಎಂದು ಸಂಘಟಕರಾದ ವೈ ಸುದರ್ಶನ್ ರಾವ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾಗವಹಿಸುವವರು 7676799859 ಈ ಫೋನ್ ಸಂಖ್ಯೆಗೆ ಕರೆ ಮಾಡಿ ನೊಂದಾಯಿಸಲು ವಿನಂತಿಸಲಾಗಿದೆ.

0 ಕಾಮೆಂಟ್ಗಳು