ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ ಮಹಿಳಾ ಒಕ್ಕೂಟ ಕಳೆದ 30 ವರ್ಷಗಳಿಂದ ವಿವಿಧ ಬಗೆಯ ಕಾರ್ಯಕ್ರಮ ಸಂಘಟಿಸಿ ಬರುವುದರ ಜೊತೆಗೆ ಆಟಿದ ಕೂಟವನ್ನು ಪ್ರತಿವರ್ಷ ಮಾಡಿಕೊಂಡು ಬಂದಿದೆ , ಮಹಿಳೆಯರ ಒಗ್ಗಟಿನ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿ ಕೊಟ್ಟಿದೆ , ಮಹಿಳೆಯರು ಮನೆಯಲ್ಲಿ ತಯಾರಿಸಿ ತಂದ ಪದಾರ್ಥಗಳ್ಳನ್ನು ವೀಕ್ಷಸಿ ಸಂತಸ ಪಟ್ಟರು , ವಿವಿಧ ಮಹಿಳಾ ತಂಡದವರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು. ನೂರಾರು ಮಹಿಳೆಯರು ಆಟಿದ ಭೋಜನ ಸವಿದು ಸಂತಸ ಪಟ್ಟರು.
ಉಪಾಧ್ಯಕ್ಷೆ ಗೀತಾ ವಾಗ್ಲೆ ಬಂಟಕಲ್ ಮಾತನಾಡುತ್ತಾ ಪರಿಸರದಲ್ಲಿ ದೊರೆಯುವ ಸಸ್ಯಗಳ ಪರಿಚಯ ಹಾಗೂ ಆಟಿದ ಊಟ, ತಿನಿಸುಗಳಲ್ಲಿ ಅಡಗಿರುವ ಔಷಧಿ ಗುಣ ಹೊಂದಿ ದ್ದ ಮಹತ್ವ ಬಗ್ಗೆ ತಿಳಿಸಿ ಕೊಟ್ಟು ಆಷಾಡ ಮಳೆಯ ಸಮಯದಲ್ಲಿ ಇಂತಹ ಆಹಾರ ಸೇವೆನೆ ಯಿಂದ ಉತ್ತಮ ಅರೋಗ್ಯ ದೊರೆಯುವುದಾಗಿ ಹೇಳಿದರು, ಜಿಲ್ಲಾ ಒಕ್ಕೊಟದ ಗೌರವ ಅಧ್ಯಕ್ಷೆ ಶೀಲಾ ಶೆಟ್ಟಿ , ಮಹಿಳಾ ಒಕ್ಕೊಟದ ಪಧಾದಿಕಾರಿಗಳು ಉಪಸ್ಥಿತರಿದ್ದರು.
ತಾಲೂಕು ಮಹಿಳಾ ಮಂಡಳಿಗಳ ಒಕ್ಕೊಟ ಉಡುಪಿ ಇದರ ಅಧ್ಯಕ್ಷೆ ಪದ್ಮಾ ರತ್ನಾಕರ್ ಸ್ವಾಗತಿದರು, ಜ್ಯೋತಿ ರಾವ್, ರೇವತಿ ನಿರೂಪಿಸಿದರು. ಸಹಾಯ ಮೇರಿ ವಂದಿಸಿದರು.