ಜಗತ್ತೇ ಪ್ರೀತಿಸಲ್ಪಡುವ ನಮ್ಮ ಸನಾತನ ಧರ್ಮದ ಮಹಿಮೆಯಿಂದು ಮತ್ತೊಂದು ಮನಮೋಹಕ ಕ್ಷಣ ದಾಖಲಾಯಿತು. ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಿಂದ ಹೊರಟ ಶ್ರೀ ಬಬ್ಬುಸ್ವಾಮಿ ಪರಿವಾರ ದೈವಗಳ ಬೆಳ್ಳಿಯ ಪರಿಕಗಳನ್ನು ಮೆರೆವವಣಿಗೆಯೊಂದಿಗೆ ಸಾಗುವ ಪವಿತ್ರ ಪ್ರಯಾಣದ ಸಂದರ್ಭದಲ್ಲಿ, ಬ್ರಿಟನ್ನ ಪ್ರಜೆಗಳಾದ ಫಿಲ್ಪಾರ್ಕ್ ಮತ್ತು ಚಾರ್ಲ್ಸ್ ಅವರು ನಮ್ಮ ತುಳುನಾಡಿನ ಐತಿಹಾಸಿಕ ಕುಣಿತ ಭಜನೆಗೆ ಹೆಜ್ಜೆ ಹಾಕಿದರು.
ಸನಾತನ ಸಂಸ್ಕೃತಿಯ ಶ್ರೇಷ್ಠತೆ, ತುಳುನಾಡಿನ ಸಮೃದ್ಧ ಪರಂಪರೆ ಮತ್ತು ಭಕ್ತಿಯ ಲಯದೊಂದಿಗೆ ಜಗತ್ತಿನ ಪ್ರಜೆಗಳು ಒಂದಾಗುವ ಈ ಅಪರೂಪದ ಕ್ಷಣವು, ಧರ್ಮದ ಬಾಂಧವ್ಯ ಹಾಗೂ ಭಾವೈಕ್ಯತೆಯ ಉಜ್ವಲ ಉದಾಹರಣೆಯಾಗಿದೆ.
V/C: Ranjith Suvarna