Header Ads Widget

"ನಮ್ಮ ಕುಂದಾಪುರ" ಫೇಸ್ ಬುಕ್ ಗುಂಪು 16ನೇ ವರ್ಷಕ್ಕೆ ಪಾದಾರ್ಪಣೆ

16 ವರ್ಷದ ಹಿಂದೆ ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಶ್ರೀ ರಾಧಾಕೃಷ್ಣ ಶೆಟ್ಟರಿಂದ ತಾನು ಹುಟ್ಟಿದ ಊರು ಕುಂದಾಪುರದ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಬೌಗೊಳಿಕ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ಪ್ರಾರಂಭಗೊಂಡ "ನಮ್ಮ ಕುಂದಾಪುರ " fasebook ಗುಂಪು ಬೆಳೆದು ಪ್ರಪಂಚದಾದ್ಯಂತ ಎರಡು ವರೆ ಲಕ್ಷಕ್ಕೂ ಹೆಚ್ಚು ಸದಸ್ಯರು ಒಳಗೊಂಡು ಈಗ ಹದಿನಾರಾನೆ ವರ್ಷಕ್ಕೆ ಪಾದರ್ಪಣೆ ಮಾಡಿದ ಶುಭ ಸಂದರ್ಭದಲ್ಲಿ ಸದ್ಯ ಇದೆ ಮೇ 11 ನೇ ತಾರೀಕಿನಂದು ಕುಂದಾಪುರದ ಚರ್ಚ್ ರಸ್ತೆ ಯಲ್ಲಿರುವ ಕಿಯೋ ನೆಕ್ಸ್ ಕಂಪ್ಯೂಟರ್ ಸೆಂಟರ್ ಸಭಾಂಗಣದಲ್ಲಿ ಸದಸ್ಯರ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಧಾಕೃಷ್ಣ ಶೆಟ್ಟರು ಅನಿವಾರ್ಯ ಕಾರಣದಿಂದ ಭಾಗವಹಿಸದಿದ್ದರೂ, ವಿಡಿಯೋ ಕಾಲ್ ನಲ್ಲಿ ಬಂದು ಕಾರ್ಯಕ್ರಮ ವೀಕ್ಷಿಸಿ ಎಲ್ಲಾ ಸದಸ್ಯರಿಗೆ ಸಂತೋಷ ಪಡಿಸಿದರು. ಪ್ರಾರಂಭದಲ್ಲಿ ನಿವೃತ್ತ ಅಧ್ಯಾಪಕ ಶ್ರೀನಿವಾಸ ಸೋಮಯಜಿ ಯವರು ತಮ್ಮ ಅನಸಿಕೆ ಹಂಚಿಕೊಂಡರು, ನಂತರದಲ್ಲಿ ತಲ್ಲೂರ್ ನಾರಾಯಣ ಶೆಟ್ಟರು, ಶಾಂತ ಹೆಬ್ಬಾರ್, ಸುನಿತಾ ಉಡುಪ, ಜೋಯ್ ಕರ್ವೇಲ್ಲೋ,ಹರ್ಷವರ್ಧನ್ ಶೆಟ್ಟಿ,ಲಕ್ಷ್ಮಿ ಮಚ್ಚಿನ, ಹಾಸ್ಯ ಕಲಾವಿದ ನಾಗರಾಜ್ ತೆಕ್ಕೆಟ್ಟೆ,ಅಲ್ದರಿನ್ ಡಿ ಸೋಜ, ಸಂದ್ಯಾ ಗಣೇಶ್, ರಮೇಶ್ ಕೆ, ಬಸವರಾಜ್ ಕುಳೂರ್ ಮತ್ತು ರಾಧಾಕೃಷ್ಣ ಶೆಟ್ಟರ ಅನುಪಸ್ಥಿತಿಯಲ್ಲಿ ಅಧ್ಯಕ್ಷತೆ ವಹಿಸಿದ್ದ ಶ್ರೀಕಾಂತ ಹೊಳ್ಳರು " ನಮ್ಮ ಕುಂದಾಪುರ " ಸದಸ್ಯರೊಂದಿಗೆ ಇರುವ ಸ್ನೇಹ ಸಂಬಂಧಗಳ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಕಾರಣಕರ್ಥರಾದ ಶ್ರೀ ಹರ್ಷವರ್ಧನ್ ಶೆಟ್ಟರಿಗೆ ಎಲ್ಲರ ಪರವಾಗಿ ತಲ್ಲೂರ್ ನಾರಾಯಣ ಶೆಟ್ಟರು ಅಭಿನಂದನೆ ಸಲ್ಲಿಸಿದರು. ವರ್ಷದಲ್ಲಿ ಎರಡಾದರು ಈ ರೀತಿಯ ಸ್ನೇಹ ಸಮ್ಮಿಲನ ನಡೆಸ ಬೇಕೆಂದು ಸದಸ್ಯರು ಅಭಿಪ್ರಾಯ ವ್ಯಕ್ತ ಪಡಿಸಿದರು. ಕೊನೆಯಲ್ಲಿ ಹರ್ಷವರ್ಧನ್ ಶೆಟ್ಟರ ವಂದನಾರ್ಪಣೆಯೊಂದಿಗೆ ಈ ಹದಿನಾರಾನೆ ಸ್ನೇಹ ಸಮ್ಮಿಲನ ಮುಕ್ತಾಯಗೊಂಡಿತು.