Header Ads Widget

ಯುವ ಕವಿಗೋಷ್ಠಿಗೆ ರಾಮಾಂಜಿ ಆಯ್ಕೆ

ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ನಡೆಯುವ ಮೈಸೂರು ವಿಭಾಗ ಮಟ್ಟದ ಯುವ ಕವಿಗೋಷ್ಠಿಗೆ ಉಡುಪಿಯ ಯುವ ಬರಹಗಾರ ರಾಮಾಂಜಿ ನಮ್ಮಭೂಮಿ ಆಯ್ಕೆಯಾಗಿದ್ದಾರೆ. 

ಕವಿಗೋಷ್ಟಿಯು ಜೂ.5ರಂದು ಬೆಳಗ್ಗೆ ಹಾಸನದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆಯಲಿದೆ. ಮೈಸೂರು ವಿಭಾಗದ ಒಟ್ಟು ಆರು ಜಿಲ್ಲೆಗಳ 16 ಮಂದಿ ಯುವ ಕವಿಗಳು ಈ ಗೋಷ್ಟಿಗೆ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಣೆ ತಿಳಿಸಿದೆ.