Header Ads Widget

ಉಭಯ ಶ್ರೀಪಾದಂಗಳವರಿಂದ ಗೋವರ್ಧನ ಕ್ಷೇತ್ರ ಭೇಟಿ

ಶ್ರೀ ಪೇಜಾವರ ಹಾಗೂ ಶ್ರೀ ಶೀರೂರು ಶ್ರೀಪಾದರು ಇಂದು ತಮ್ಮ ಚಾತುರ್ಮಾಸ್ಯದ ಅಂಗವಾಗಿ ನಡೆದ ಶೋಭಾಯಾತ್ರೆ ಮುನ್ನ ಪೂಜ್ಯ ಪರ್ಯಾಯ ಶ್ರೀಪಾದರ ಅಪೇಕ್ಷೆಯಂತೆ ಬೆಂಗಳೂರುಶ್ರೀ ಪುತ್ತಿಗೆ ಮಠಕ್ಕೆ ಚಿತ್ತೈಸಿ, ಶ್ರೀ ಗೋವರ್ಧನಧಾರಿಕೃಷ್ಣ ದೇವರ ದರ್ಶನ ಪಡೆದುಕೊಂಡರು.

ಈ ಸಂದರ್ಭದಲ್ಲಿ ಶ್ರೀ ಮಠದಿಂದ ವಿಶೇಷ ಗೌರವಾದರಗಳನ್ನು ಉಭಯ ಶ್ರೀಪಾದಂಗಳರವರಿಗೆ ಮಾಡಲಾಯಿತು. 

ಪೂಜ್ಯ ಶ್ರೀಗಳು ಗೋವರ್ಧನಧಾರಿ ವಿದ್ಯಾಪೀಠದ ಮಕ್ಕಳಿಗೆ ಮತ್ತು ನೆರೆದ ಭಕ್ತ ವೃಂದಕ್ಜೆ ಆಶೀರ್ವಚನವನ್ನು ಮಾಡಿದರು.

ಶ್ರೀಪಾದರ ಕಾರ್ಯದರ್ಶಿ ಪ್ರಸನ್ನಚಾರ್ಯ ಹಾಗೂ ಶ್ರೀಮಠದ ವ್ಯವಸ್ಥಾಪಕ ಎ ಬಿ ಕುಂಜಾರ ರವರು ಗೌರವಾರ್ಪಣೆಯನ್ನು ಸಲ್ಲಿಸಿದರು.

ಅಪೂರ್ವವಾದ ಗೋವರ್ಧನ ಗುಹಾದೇವಾಲಯನ್ನು ನೋಡಿದ ಭಾವಿ ಪರ್ಯಾಯ ಶ್ರೀಪಾದರು ಕೆತ್ತಿದ ಶ್ರೀಕೃಷ್ಣನ ಮಹಿಮಾಚಿತ್ರಗಳನ್ನು ನೋಡಿ ವಿಶೇಷವಾಗಿ ಮೆಚ್ಚಿಕೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು