ಕನ್ನಡ ಸಿನಿಮಾರಂಗದ ಹಿರಿಯ ನಟ ಶ್ರೀ ರಮೇಶ್ ಭಟ್ ಅವರು ತಾವು ಬರೆದ ಗೀತಾಲೇಖನವನ್ನು ರಾಜಾಂಗಣದಲ್ಲಿ ಪರ್ಯಾಯ ಶ್ರೀಗಳಿಗೆ ಸಮರ್ಪಿಸಿದರು. ಕಿರಿಯ ಶ್ರೀಪಾದರು ಉಪಸ್ಥಿತರಿದ್ದರು.
ಪರ್ಯಾಯ ಶ್ರೀಪಾದರು ಎಂಭತ್ತರ ಈ ಪ್ರಾಯದಲ್ಲಿ ರಮೇಶ್ ಭಟ್ ಅವರು ಗೀತೆ ಬರೆದದ್ದು ಬಹಳ ಸಂತೋಷದ ವಿಷಯ, ಚಲನಚಿತ್ರರಂಗದವರೂ ಕೂಡಾ ನಮ್ಮ ಕೋಟಿಗೀತಾಲೇಖನ ಯಜ್ಞದಲ್ಲಿ ಭಾಗವಹಿಸಲು ಪ್ರೇರಣೆ ನೀಡಿದಂತಾಯಿತು ಎಂದು ತಿಳಿಸಿ ಶ್ರೀ ರಮೇಶ್ ಭಟ್ ದಂಪತಿಗಳಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಸಂಮಾನಿಸಿ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು.
0 ಕಾಮೆಂಟ್ಗಳು