ಮುಂಬಯಿ, ಆ.04: ಮಾಟುಂಗಾ ಧಾರಾವಿ ಇಲ್ಲಿನ ಟ್ರಾನ್ಸಿಟ್ ಕ್ಯಾಂಪ್ ಇಲ್ಲಿ ವಾಸವಾಗಿದ್ದ ಎನ್ನಲಾದ ಸುಮಾರು 51 ವರ್ಷ ಪ್ರಾಯದ ಆನಂದ್ ಮೋನಪ್ಪ ಪೂಜಾರಿ ಅನ್ನುವ ವ್ಯಕ್ತಿ ಅನಾರೋಗ್ಯದಿಂದ ಸಯಾನ್ ಆಸ್ಪತ್ರೆಯಲ್ಲಿ ದಾಖಲಾಗಿ ಇದೀಗ ನಿಧನರಾ ಗಿ ದ್ದಾರೆ
ಮೃತರು ಕರ್ನಾಟಕ ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ (ಉಡುಪಿ) ಜಿಲ್ಲೆಯ ಮೂಲವಾಸಿ ಎನ್ನಲಾಗಿದ್ದು ಮೃತರ ಸಂಬಂಧಿಕರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ ಮೃತದೇಹವನ್ನು ಸಯಾನ್ ಆಸ್ಪತ್ರೆಯಲ್ಲಿರಿಸಲಾಗಿದ್ದು ವಾರಿಸುದಾರರ ಪತ್ತೆಗಾಗಿ ಸೂಚನೆ ಹೊರಡಿಸಲಾಗಿದೆ.
ಮೃತದೇಹದ ಪೋಸ್ಟ್ಮರ್ಟಮ್ ಮತ್ತು ಅಂತ್ಯಸಂಸ್ಕಾರಕ್ಕಾಗಿ ಮೃತವ್ಯಕ್ತಿಯ ಸಂಬಂಧಿಕರುಅಥವಾ ಪರಿಚಯಿತರು ಈ ಕೂಡಲೇ ಸಮಾಜ ಸೇವಕ ಡಾ| ಶಿವ ಮೂಡಿಗೆರೆ (9320777774) ಅಥವಾ ಶಾಹು ನಗರ ಪೊಲೀಸ್ ಠಾಣೆ, ಮಾಟುಂಗಾ, ಮುಂಬಯಿ ಇದರ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಸಾಯಿ ಚಂದ್ರಭಾನ್ ಪಾಟೀಲ್ (ಮೊ: 9594276644) ಇವರನ್ನು ಸಂಪರ್ಕಿಸುವಂತೆ ಕೋರಿದ್ದಾರೆ.
.jpg)
 
 
 
 
 
 
 
0 ಕಾಮೆಂಟ್ಗಳು