ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ , 125 ವರ್ಷದ ಭಜನಾ ಸಪ್ತಾಹ ಅಂಗವಾಗಿ 6 ನೇ ದಿನವಾದ ಸೋಮವಾರ ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ ಶ್ರೀದೇವಿ ಭೂದೇವಿ ಸಹಿತ ಗರುಡಾರೂಢ ಶ್ರೀ ಲಕ್ಷ್ಮೀ ವೆಂಕಟೇಶ ವಿಶೇಷ ಅಲಂಕಾರವನ್ನು ಪ್ರಧಾನ ಅರ್ಚಕರಾದ ವಿನಾಯಕ ಭಟ್, ದಯಾಘನ್ ಭಟ್ ನೆರವೇರಿಸಿದರು.
ದೇವಾಲಯ ಹಾಗೂ ಭಜನಾ ಸಾಳಿಯನ್ನು ವಿಶೇಷ ಹೂವಿನಿಂದ ಅಲಂಕಾರ ಈ ಸಂದರ್ಭದಲ್ಲಿ ಮಹಾ ರಂಗಪೂಜೆ ನೆಡೆಯಿತು. ಸಾವಿರಾರು ಭಕ್ತರೂ ಸರತಿ ಸಾಲಿನಲ್ಲಿ ಶ್ರೀದೇವರ ದರ್ಶನ ಪಡೆದು ಧನ್ಯರಾದರು.
ಆಡಳಿತ ಮಂಡಳಿಯ ಸದಸ್ಯರು, ಜಿ ಎಸ್ ಬಿ ಯುವಕ ಮಂಡಳಿ ಸದಸ್ಯರು, ಜಿ ಎಸ್ ಬಿ ಮಹಿಳಾ ಮಂಡಳಿಯ ಸದಸ್ಯರು ಇದ್ದರು.
0 ಕಾಮೆಂಟ್ಗಳು