ಉಡುಪಿ ಜಿಲ್ಲೆಯಲ್ಲಿರುವ ನೇಕಾರರ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ದುಡಿಯುತ್ತಿರುವ ನೇಕಾರರಿಗೆ ಕೈಮಗ್ಗ ಉತ್ಪಾದನೆಗಳ ಉತ್ಪನ್ನದಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಸಂಪೂರ್ಣ ನೆರವನ್ನು ನೀಡಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸಲಹೆ ನೀಡಿದರು. ಕೇಂದ್ರ ಸರ್ಕಾರದಿಂದ ನೇಕಾರರಿಗೆ ಸಿಗುವ ಸಾರಿಗೆ ಸಬ್ಸಿಡಿ (ಎನ್.ಹೆಚ್.ಡಿ.ಸಿ), ನೂಲ ಖರೀದಿಯ ಮೇಲೆ ಶೇ. ೧೫ ರಷ್ಟು ವಿನಾಯಿತಿ, ನೇಕಾರರ ವರ್ಕ್ ಶೆಡ್ ನಿರ್ಮಾಣಕ್ಕಾಗಿ ಸಿಗಬಹುದಾದ ತಲಾ ರೂ. ೧.೨೦ ಲಕ್ಷ ಸಬ್ಸಿಡಿ, ನೇಕಾರರಿಗೆ ಸೋಲಾರ್ ಲೈಟ್ ನೆರವು, ಕೈ ಮಗ್ಗದಲ್ಲಿ ದುಡಿಯುವ ಕಾರ್ಮಿಕರಿಗೆ ರಾಷ್ಟಿçÃಕೃತ ಬ್ಯಾಂಕ್ಗಳ ಮೂಲಕ ಮುದ್ರಾ ಸಾಲದ ಆರ್ಥಿಕ ನೆರವು, ಕೈಮಗ್ಗ ಸಲಕರಣೆಗಳ ಖರೀದಿಗೆ ಆರ್ಥಿಕ ನೆರವು ಹಾಗೂ ಸಮರ್ಥ ಯೋಜನೆಯ ಮೂಲಕ ಹೊಸ ಉತ್ಸಾಹಿ ಅಭ್ಯರ್ಥಿಗಳಿಗೆ ನುರಿತ ಕೈಮಗ್ಗ ತರಬೇತುದಾರರಿಂದ ಕೈ ಮಗ್ಗ ತರಬೇತಿ ಹಾಗೂ ಮುಂತಾದ ಈ ಯೋಜನೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ಪಡೆದುಕೊಂಡ ಸಂಸದ ಕೋಟ, ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಡುವ ಸರ್ವ ಸವಲತ್ತುಗಳನ್ನು ಇಲಾಖೆಯು ಜವಾಬ್ದಾರಿಯಿಂದ ಫಲಾನುಭವಿಗಳಿಗೆ ಯೋಜನೆ ತಲುಪಿಸಲು ನೆರವಾಗಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಕೈಮಗ್ಗ ಉತ್ಪಾದನೆ ಮಾಡುವ ತರಬೇತಿ ಕೇಂದ್ರಕ್ಕೆ ಸಪ್ಟಂಬರ್ ಅಂತ್ಯದೊಳಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಹಾಗೂ ಕೇಂದ್ರ ಸರ್ಕಾರದ ನೆರವಿನೊಂದಿಗೆ, ಜಿಲ್ಲೆಯಲ್ಲಿ ನೇಕಾರರಿಗೆ ಅನುಕೂಲವಾಗುವ ಅಗತ್ಯ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಂಸದ ಕೋಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಸದರ ಕಚೇರಿಯಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಡುಪಿ ಜಿಲ್ಲೆಯ ಕೈಮಗ್ಗ ಹಾಗೂ ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಮಂಜುನಾಥ್, ಜಿಲ್ಲಾ ಕೌಲಾಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಶ್ರೀ ಅರುಣ್ ಕುಮಾರ್ ರವರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
0 ಕಾಮೆಂಟ್ಗಳು