ಉಡುಪಿ ತಾಲೂಕಿನ ಅಂಬಾಗಿಲು ಜಂಕ್ಷನ್ ಸಮೀಪ ನಡೆದ ದುರಂತ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಕುಂದಾಪುರದಿಂದ ಉಡುಪಿಯ ಕಡೆಗೆ ಸಂಚರಿಸುತ್ತಿದ್ದ ಎಕ್ಸ್ಪ್ರೆಸ್ ಬಸ್ ಹಾಗೂ ಬೈಕ್ ನಡುವೆ ತೀವ್ರ ಡಿಕ್ಕಿ ಸಂಭವಿಸಿದೆ. ಆಘಾತದ ಪರಿಣಾಮ ಬೈಕ್ ಸವಾರನು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆಯ ಮಾಹಿತಿ ಪಡೆದ ತಕ್ಷಣ ಉಡುಪಿ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
0 ಕಾಮೆಂಟ್ಗಳು