Header Ads Widget

ಮೋದಿ ಭರ್ಜರಿ ರೋಡ್ ಶೋ: ಸಹಸ್ರಾರು ಅಭಿಮಾನಿಗಳಿಂದ ಪುಷ್ಪವೃಷ್ಟಿ



ಉಡುಪಿ: ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಶುಕ್ರವಾರ ನಡೆದ ಲಕ್ಷ ಕಂಠ ಗೀತ ಪಾರಾಯಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಆದಿವುಡುಪಿ ಹೆಲಿಪ್ಯಾಡ್ನಿಂದ ಕೃಷ್ಣಮಠಕ್ಕೆ ಆಗಮಿಸುವ ಮಾರ್ಗ ಮಧ್ಯದಲ್ಲಿ ಬನ್ನಂಜೆ ಡಾ.ವಿಎಸ್.ಆಚಾರ್ಯ ಬಸ್ ನಿಲ್ದಾಣ ಬಳಿಯ ನಾರಾ ಯಣಗುರು ವೃತ್ತದಿಂದ ತೊಡಗಿ ಕಲ್ಸಂಕ ಜಂಕ್ಷನ್ ವರೆಗೆ ಮೂರು ಕಡೆಗಳಲ್ಲಿ ರೋಡ್ ಶೋ ನಡೆಸಿ ದರು. 

ನೆಚ್ಚಿನ ನಾಯಕ ನರೇಂದ್ರ ಮೋದಿ ಅವರನ್ನು ಕಾಣಲು ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನೆರೆದಿತ್ತು. ಮೋದಿ ಪರ ಘೋಷಣೆ ಕೂಗುತ್ತಾ `ಮೋದಿ...ಮೋದಿ' ಎಂಬ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ನಡುನಡುವೆ ಜೈಶ್ರೀರಾಮ್ ಘೋಷಣೆ ಕೇಳಿಬಂತು.


ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರ ಹರ್ಷೋದ್ಗಾರ ಗಮನಿಸಿದ ಪ್ರಧಾನಿ ಮೋದಿ ಕಾರಿನ ಮುಂಭಾಗದ ಬಾಗಿಲು ತೆರೆದು ಜನತೆಯತ್ತ ಕೈಬೀಸಿದರು. ರಸ್ತೆಯುದ್ದಕ್ಕೂ ನೆರೆದಿತ್ತ ಅಭಿಮಾನಿಗಳು ಮೋದಿಯತ್ತ ಹೂಮಳೆಗರೆದರು. ಅದೇ ವೇಳೆ ಮೋದಿಯವರೂ ಅಭಿಮಾನಿಗಳಿಗೆ ಹೂ ಎಸೆದಿರುವುದು ಅಭಿಮಾನಿಗಳ ಸಂತಸ ನೂರ್ಮಡಿ ವೃದ್ಧಿಸಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು