Header Ads Widget

ಸ್ವರ್ಣ ಪಾರ್ಥ ಸಾರಥಿ ರಥಕ್ಕೆ ಚಿನ್ನದ ಹೊದಿಕೆ ಕಾರ್ಯಕ್ಕೆ ಚಾಲನೆ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರ ಆಶ್ರಮ ಸ್ವೀಕಾರ,ಪೀಠಾರೋಹಣದ ಸುವರ್ಣ ಮಹೋತ್ಸವದ ನಿಮಿತ್ತ, ಭಕ್ತರ ಸಹಕಾರದೊಂದಿಗೆ ಉಡುಪಿ ಶ್ರೀಕೃಷ್ಣನಿಗೆ ಅರ್ಪಿಸಲ್ಪಡುವ ಸ್ವರ್ಣ ಪಾರ್ಥ ಸಾರಥಿ ರಥಕ್ಕೆ ಚಿನ್ನದ ಹೊದಿಕೆ ಜೋಡಿಸುವ ಪ್ರಕ್ರಿಯೆಗೆ ಇಂದು ಪರ್ಯಾಯ ಶ್ರೀಪಾದರು ಕಿರಿಯ ಶ್ರೀಪಾದರ ಜೊತಿಗೂಡಿ ಚಾಲನೆ ನೀಡಿದರು.

ಈ ಸ್ವರ್ಣ ರಥ ಇದೇ ತಿಂಗಳ 27 ರಂದು ಉಡುಪಿ ಶ್ರೀಕೃಷ್ಣನಿಗೆ ಸಮರ್ಪಿಸಲ್ಪಡಲಿದೆ.

ಈ ಸಂದರ್ಭದಲ್ಲಿ ಶ್ರೀ ಮಠದ ಮುರಳೀಧರಾಚಾರ್ಯ, ನಾಗರಾಜಾಚಾರ್ಯ,ಪ್ರಸನ್ನಾಚಾರ್ಯ ಹಾಗೂ ಖ್ಯಾತ ಕಲಾವಿದ ಗಂಜೀಫಾ ರಘುಪತಿ ಭಟ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು