ಎಚ್. ಜಯಪ್ರಕಾಶ್ ಕೆದ್ಲಾಯರಿಗೆ ಅತ್ಯುತ್ತಮ ಅಧ್ಯಕ್ಷ ಕಾರ್ಯಕ್ಷಮತೆ ರಾಷ್ಟ್ರೀಯ ಪ್ರಶಸ್ತಿ

 

ನವದೆಹಲಿಯಲ್ಲಿ ನಡೆದ  ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್‌ನ ಅಧ್ಯಕ್ಷ ಎಚ್. ಜಯಪ್ರಕಾಶ್ ಕೆದ್ಲಾಯರವರಿಗೆ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ  ಅತ್ಯುತ್ತಮ ಅಧ್ಯಕ್ಷ ಕಾರ್ಯಕ್ಷಮತೆ ರಾಷ್ಟ್ರೀಯ   ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 


ಕೇಂದ್ರದ ರಾಜ್ಯ ಖಾತೆಯ ಮಾಜಿ ಸಚಿವರಾದ ಶ್ರೀ ನಾಗ್‌ಮಣಿ ಕುಶ್ವಾಹ, ದೆಹಲಿ ವಿಧಾನಸ ಭೆಯ ಸಭಾಧ್ಯಕ್ಷರಾದ  ರಾಮ್ ನಿವಾಸ್ ಗೋಯೆಲ್, ಉತ್ತರಾಖಂಡದ ಶಾಸಕ ಪಿ.ಸಿ. ನೈಲ್‌ವಾಲ್ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು