ಕರಂಬಳ್ಳಿ: ವಿಪ್ರ ಮಹಿಳಾ ದಿನಾಚರಣೆ

 

ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯಿಂದ ವಿಪ್ರ ಮಹಿಳಾ ದಿನಾಚರಣೆ ನಡೆಯಿತು.

ಎಂಜಿಎಂ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕರಾದ ಡಾ ವಸುಮತಿ ಭಟ್ ಅವರು ಉಪನ್ಯಾಸ ನೀಡಿದರು. 

ಪತಂಜಲಿ ಯೋಗ ಸಂಸ್ಥೆಯ ಕರಂಬಳ್ಳಿ ಕಕ್ಷೆಯ ಮುಖ್ಯ ಯೋಗ ಶಿಕ್ಷಕಿ ಶ್ರೀಮತಿ ಸಂಪ್ರೀತ ಹೆಗ್ಡೆ ಅವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. 

ಕರಂಬಳ್ಳಿ ವಲಯದ ಅಧ್ಯಕ್ಷ ಕೀಳಂಜೆ ಶ್ರೀ ಕೃಷ್ಣರಾಜ ಭಟ್ ಅಧ್ಯಕ್ಷತೆ ವಹಿಸಿ ಪ್ರಸ್ತಾವನೆಗೈದರು. ಮಹಿಳಾ ಪ್ರತಿನಿಧಿ ಲಲಿತಾ ರಾಜಶೇಖರ್ ಮಹಿಳಾ ದಿನಾಚರಣೆಯ ಬಗ್ಗೆ ಮಾತನಾಡಿದರು. ಇದಕ್ಕೂ ಮೊದಲು ವಿಪ್ರ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಸುಧಾ ಹರಿದಾಸ್ ಭಟ್ ಮತ್ತು ವಸುಧಾ ಕೃಷ್ಣರಾಜ ನಡೆಸಿದರು. ಸನ್ಮಾನ ಸ್ವೀಕರಿಸಿದ ಸಂಪ್ರೀತ ಹೆಗಡೆ ಅವರು ವೇದಿಕೆಯಲ್ಲಿ ಯೋಗ ಪ್ರಾತ್ಯಕ್ಷಿಕೆ ನೀಡಿದರು. ಈ ಸಂದರ್ಭದಲ್ಲಿ ನೂತನ ಸದಸ್ಯರನ್ನು ಸಮಿತಿಯಿಂದ ಗೌರವಿಸಲಾಯಿತು.

ಮಹಿಳಾ ಅಧ್ಯಕ್ಷ ಜಯ ಟೀಚರ್, ಕಾರ್ಯದರ್ಶಿ ನಾಗರಾಜ ಭಟ್ ಉಪಾಧ್ಯಕ್ಷ ರಂಗನಾಥ ಸಾಮಗ ಉಪಸ್ಥಿತರಿದ್ದರು. ರೂಪ ಲಕ್ಷ್ಮೀಶ್, ಶ್ರೀಜಾ, ರಂಗನಾಥ ಸರಳಾಯ ಮತ್ತು ಲಕ್ಷ್ಮೀನಾರಾಯಣ ಆಚಾರ್ಯ ಸಹಕರಿಸಿದರು.

ಶ್ರದ್ಧಾ ಭಟ್ ಮತ್ತು ಕವಿತಾ ಲಕ್ಷ್ಮಿ ನಾರಾಯಣ್ ಕಾರ್ಯಕ್ರಮ ನಿರ್ವಹಿಸಿ ರಾಧಿಕಾ ಚಂದ್ರಕಾಂತ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು