ದಿನಾಂಕ : 10/06/2025ರಂದು ರಾತ್ರಿ 08:30 ಗಂಟೆಗೆ ಮಲ್ಪೆ ಬೀಚ್ ಬಳಿಯ ಪಾನಿ ಪೂರಿ ಅಂಗಡಿಯಲ್ಲಿ ಹೆಚ್ಚುವರಿಯಾಗಿ ಒಂದು ಪಾನಿ ಪೂರಿ ನೀಡುವ ವಿಷಯವಾಗಿ ಪ್ರವಾಸಕ್ಕೆ ಬಂದ ಮಂಡ್ಯ ಜಿಲ್ಲೆಯ ಪ್ರವಾಸಿಗರಿಗೆ ಮತ್ತು ಸ್ಥಳೀಯ ಪಾನಿ ಪುರಿ ಅಂಗಡಿಯವರಿಗೆ ಗಲಾಟೆಯಾಗಿ, ಬೈದಾಡಿಕೊಂಡಿದ್ದು, ಎರಡೂ ಕಡೆಯಿಂದ ಹಲ್ಲೆ ನಡೆಸಿರುತ್ತಾರೆ.
ಈ ಬಗ್ಗೆ ದೂರು ಪ್ರತಿದೂರು ನೀಡಲಾಗಿದ್ದು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಎರಡು ಪ್ರಕರಣಗಳು ಕೇಸ್ ಕೌಂಟರ್ ಕೇಸ್ ಆಗಿದ್ದು, ಮೊದಲ ಪ್ರಕರಣದ ಆರೋಪಿಗಳಾದ 1.ಸುದೀಪ, 2.ಸಂಪತ್, 3.ಪುನೀತ, 4.ಮಹೇಶ, 5.ಕನ್ನ ವೈಜಿ 6.ಅರವಿಂದ ಹಾಗೂ ಎರಡನೇ ಪ್ರಕರಣದ ಆರೋಪಿಗಳಾದ 1.ರಮೇಶ 2.ಮೋನು 3.ವಿನೋದನನ್ನು ದಸ್ತಗಿರಿ ಮಾಡಲಾಗಿರುತ್ತದೆ.
0 ಕಾಮೆಂಟ್ಗಳು