ಗೆಳೆತನದ ಪುಟದಲ್ಲಿ ಶಾಶ್ವತವಾದವನು.
ಭಾವನೆಗಳ ಮೂಲಕ ಎನ್ನ ಹೃದಯಸ್ಥನಾದವನು.
ಎಂದೆಂದೂ ಬಾಡದ ನಗು ಮುಖದ ಸರದಾರನಾದವನು.
ನನ್ನ ಬಾಳೊಳು ಸಖ್ಯದ ಸುಖ ನೀಡಿ ಮಿಂಚಿದವನು..//.೧ //
ಜೀವಯಾನದಲಿ ತಂಪು ಬರೆದವನು.
ಆಕಾಶ ಧರಣಿಯಂತೆ ಸೌಖ್ಯ ಬೆಸೆದವನು.
ಕೋಪ ತಾಪವಿಲ್ಲದ ಸಹನಾಮೂರ್ತಿ ಇವನು.
ಸುಮ್ಮನೆ ಎಂದೂ ಕೂರದ ಜನನಾಯಕನಾಗಿದ್ದವನು.// ೨//
ಕಾಯ ಅಳಿದರೂ ನಿತ್ಯ ನೆನಪಾಗುವವನು.
ನನ್ನ ದು:ಖ ದುಮ್ಮಾನದಲಿ ಬೆಳಕು ಹಿಡಿದವನು.
ಜನುಮ ಜನುಮದ ಋಣ ತೀರಿಸಲಾಗದವನು..
ನನ್ನ ಪಾಲಿಗೆ ಎಂದೆಂದೂ ಮರೆಯಲಾಗದ ಪುಣ್ಯಾತ್ಮನು.// ೩//
ನನ್ನ ವ್ಯಕ್ತಿತ್ವ ವಿಕಸನದ ಪರಿಯ ಕೊಂಡಾಡಿದವನು.
ಮರೆಯಲಾರೆನು ಗೆಳೆಯ ನನ್ನ ಬಾಳಿನ ಕೊನೆಯವರೆಗೂ.//.೪//
ರಚನೆ
ಹರಿದಾಸ ಬಿ.ಸಿ.ರಾವ್.ಶಿವಪುರ
ಸಹಪಾಠಿ ಮತ್ತು ಸ್ನೇಹಿತ.

0 ಕಾಮೆಂಟ್ಗಳು