ಗೆಳೆತನದ ಪುಟದಲ್ಲಿ ಶಾಶ್ವತವಾದವನು... ~ಹರಿದಾಸ ಬಿ.ಸಿ.ರಾವ್.ಶಿವಪುರ

ಗೆಳೆತನದ ಪುಟದಲ್ಲಿ ಶಾಶ್ವತವಾದವನು.

ಭಾವನೆಗಳ ಮೂಲಕ ಎನ್ನ ಹೃದಯಸ್ಥನಾದವನು.

ಎಂದೆಂದೂ ಬಾಡದ ನಗು ಮುಖದ ಸರದಾರನಾದವನು.

ನನ್ನ ಬಾಳೊಳು ‌ಸಖ್ಯದ ಸುಖ ನೀಡಿ ಮಿಂಚಿದವನು..//.೧ //


ಜೀವಯಾನದಲಿ ತಂಪು ಬರೆದವನು.

ಆಕಾಶ ಧರಣಿಯಂತೆ ‌ ಸೌಖ್ಯ ಬೆಸೆದವನು.

ಕೋಪ ತಾಪವಿಲ್ಲದ ಸಹನಾಮೂರ್ತಿ ಇವನು.

‌ಸುಮ್ಮನೆ ಎಂದೂ ಕೂರದ ಜನನಾಯಕನಾಗಿದ್ದವನು.// ೨//


ಕಾಯ ಅಳಿದರೂ ನಿತ್ಯ ನೆನಪಾಗುವವನು.

ನನ್ನ ದು:ಖ ದುಮ್ಮಾನದಲಿ ಬೆಳಕು ಹಿಡಿದವನು.

ಜನುಮ ಜನುಮದ ಋಣ ತೀರಿಸಲಾಗದವನು..

ನನ್ನ ಪಾಲಿಗೆ ಎಂದೆಂದೂ ಮರೆಯಲಾಗದ ಪುಣ್ಯಾತ್ಮನು.// ೩//


ನನ್ನ ವ್ಯಕ್ತಿತ್ವ ವಿಕಸನದ ಪರಿಯ ಕೊಂಡಾಡಿದವನು.

ಮರೆಯಲಾರೆನು ಗೆಳೆಯ ನನ್ನ ಬಾಳಿನ ಕೊನೆಯವರೆಗೂ.//.೪//


ರಚನೆ 

ಹರಿದಾಸ ಬಿ.ಸಿ.ರಾವ್.ಶಿವಪುರ

ಸಹಪಾಠಿ ಮತ್ತು ಸ್ನೇಹಿತ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು