Header Ads Widget

ಬಾಳಿಗ ಆಸ್ಪತ್ರೆ: ವಿಶ್ವ ಚಿತ್ತವಿಕಲತೆಯ ದಿನದ ಪ್ರಯುಕ್ತ ಜಾಗೃತಿ ಕಾರ್ಯಕ್ರಮ

ಡಾ.ಕಮಲ್.ಎ.ಬಾಳಿಗ ಚಾರಿಟೇಬಲ್ ಟ್ರಸ್ಟ್ .ರಿ. ಮುಂಬಯಿ, ಡಾ.ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ ಇವುಗಳ ಜಂಟಿ ಆಶ್ರಯದಲ್ಲಿ  ವಿಶ್ವ ಚಿತ್ತವಿಕಲತೆಯ ದಿನದ ಪ್ರಯುಕ್ತ ಬಾಳಿಗ ಆಸ್ಪತ್ರೆಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.

ಸಂಸ್ಥೆಯ ಮನೋ ವೈದ್ಯರು ಡಾ.ಮಾನಸ್ ಇ.ಆರ್ ಉದ್ಘಾಟನೆ ಮಾಡಿದರು.ಆಡಳಿತಾಧಿಕಾರಿ ಶ್ರೀಮತಿ ಸೌಜನ್ಯ ಶೆಟ್ಟಿ,ನರ್ಸಿಂಗ್ ಮೇಲ್ವಿಚಾರಕಿ ಶ್ರೀಮತಿ ಪ್ರಮೀಳಾ ಡಿಸೋಜ, ನ್ಯೂ ಸಿಟಿ ನರ್ಸಿಂಗ್ ಕಾಲೇಜು ಉಡುಪಿ ವಿದ್ಯಾರ್ಥಿನಿ ನಾಯಕಿ ಕು.ದೀಪ್ತಿ ಉಪಸ್ಥಿತಿ ಇದ್ದರು. ಸಭಾ ಕಾರ್ಯಕ್ರಮದ ಬಳಿಕ ಚಿತ್ತವಿಕಲತೆಯ ಲಕ್ಷಣ ಹಾಗೂ ಚಿಕಿತ್ಸೆ ಬಗ್ಗೆ ಮನೋ ವೈದ್ಯರು ಮತ್ತು ಚಿತ್ತವಿಕಲತೆಯ ರೋಗಿ ಹಾಗೂ ದಾದಿಯರ ಕಾಳಜಿ ವಿಷಯದ ಬಗ್ಗೆ ನರ್ಸಿಂಗ್ ಮೇಲ್ವಿಚಾರಕರು ಮಾಹಿತಿ ನೀಡಿದರು.

ಅಪ್ತ ಸಮಲೋಚಕರಾದ ವಿಶ್ವೇಶ್ವರ್ ಭಟ್ ಪ್ರಾರ್ಥಿಸಿದರು.

ಸಮುದಾಯ ಕಾರ್ಯಕರ್ತರಾದ ಸುರೇಶ್ ಎಸ್.ನಾವೂರ್ ಕಾರ್ಯಕ್ರಮ ನಿರ್ವಹಿಸಿದರು.