ಹಾಗೆಯೇ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮಳೆಯ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಅಗತ್ಯವಾದ ಮುಂಜಾಗ್ರತಾ ಕ್ರಮ ಹಾಗೂ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲು, ಸಾರ್ವಜ ನಿಕ ದೂರುಗಳಿಗೆ ತುರ್ತುಸ್ಪಂದಿಸಲು ನಗರಸಭೆಯಲ್ಲಿ ಮಳೆಗಾಲದ ತುರ್ತುಕಾರ್ಯಪಡೆ ಇದ್ದು ಆಯಾಯ ವಾರ್ಡ್ ಗಳಿಗೆ ಸೂಪರ್ ವೈಸರ್ ಹಾಗೂ ಆರೋಗ್ಯ ನಿರೀಕ್ಷಕರನ್ನು ನಗರಸಭೆ ನೇಮಿಸಿ ರುತ್ತದೆ.
ಜನರು ಮಳೆಯ ಅನಾಹುತಗಳಿಗೆ ಧೃತಿಗೆಡದೆ ಯಾವುದೇ ಸಮಸ್ಯೆಗಳು ಎದುರಾದಲ್ಲಿ ನಗರ ಸಭೆಯ ಸಹಾಯವಾಣಿ ನಿಯಂತ್ರಣ ಕೊಠಡಿ ಸಂಖ್ಯೆ 0820 -2520306, ನೋಡಲ್ ಅಧಿಕಾರಿ ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್ 9741943666 ಹಾಗೂ ತಮ್ಮ ಮೊಬೈಲ್ ಸಂಖ್ಯೆಗೆ 9844192340 ಕರೆ ಮಾಡಬಹುದು.ಹಾಗೆಯೇ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗಿ ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.