Header Ads Widget

ಕಾಂತಾರ ಚಿತ್ರಕ್ಕೆ ಮತ್ತೊಂದು ಆಘಾತ!

ಕಾಂತರ ಚಿತ್ರದ ಚಿತ್ರೀಕರಣಕ್ಕಾಗಿ ಆಗಮಿಸಿದ್ದ ಕೇರಳ ಮೂಲದ ಮಿಮಿಕ್ರಿ ಕಲಾವಿದ ನಿಜು ವಿ.ಕೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಮ್ ಸ್ಟೇವೊಂದರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಿಮಿಕ್ರಿ ಕಲಾವಿದ ನಿಜು ವಿ.ಕೆ ಅವರು ಕಾಂತರ ಚಿತ್ರ ಚಿತ್ರೀಕರಣಕ್ಕಾಗಿ ಆಗಮಿಸಿದ್ದರು. ಅವರು ಆಗುಂಬೆ ಹೋಮ್ ಸ್ಟೇವೊಂದರಲ್ಲಿ ತಂಗಿದ್ದರು.

ಬುಧವಾರ ರಾತ್ರಿ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣ ತೀರ್ಥಹಳ್ಳಿ ಆಸ್ಪತ್ರೆಗೆ ರವಾನಿಸುವ ಮಾರ್ಗ ಮದ್ಯೆ ಕೊನೆಯಿಸಿರೆಳೆದಿದ್ದಾರೆ. ಮೃತ ದೇಹವನ್ನು ತೀರ್ಥಹಳ್ಳಿ ಜೆ.ಸಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಕುಟುಂಬದವರು ಕೇರಳದಿಂದ ಆಗಮಿಸುತ್ತಿದ್ದಾರೆ ಎಂಬ ಮೂಲಗಳು ಸಿಕ್ಕಿವೆ. ಇನ್ನು ಕಾಂತರ ಚಿತ್ರ ಶುರುವಾದ ನಂತರ ಒಟ್ಟು 3 ಸಾವುಗಳು ಆಗಿದ್ದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು