ಕೊಲ್ಲೂರು : ಶ್ರೀ ಮೂಕಾಂಬಿಕೆಗೆ ದೇವಿಗೆ 1 ಕೆ ಜಿ ತೂಕದ ರತ್ನ ಖಚಿತ ಚಿನ್ನದ ಮುಖವಾಡ ಸಮರ್ಪಣೆ



ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ 1 ಕೆ ಜಿ ತೂಕದ ರತ್ನ ಖಚಿತ ಚಿನ್ನದ ಮುಖವಾಡವನ್ನು ಸಮರ್ಪಿಸಲಾಗಿದೆ.  ತುಮಕೂರು ಜಿಲ್ಲೆಯ ಶಿರಾದ ದಾನಿಗಳಾದ ಆಯುರ್ವೇದ ವೈದ್ಯ ಡಾ. ಕೆ. ಲಕ್ಷ್ಮೀನಾರಾಯಣ ಮತ್ತು ಅವರ ಕುಟುಂಬಿಕರು ಕೊಲ್ಲೂರು ಶ್ರೀ ಮೂಕಾಂಬಿಕೆಗೆ  ಮುಖವಾಡ ಸಮರ್ಪಣೆ ಮಾಡಿದರು. ಈ ಸಂದರ್ಭ ದಲ್ಲಿ ದೇಗುಲದ ವತಿಯಿಂದ ವೈದ್ಯರ ಕುಟುಂಬವನ್ನು ಗೌರವಿಸಲಾಯಿತು.


ಈ ಸಂದರ್ಭ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಸಮಿತಿಯ ಸದಸ್ಯರಾದ ರಘುರಾಮ್ ದೇವಾಡಿಗ, ಮಹಾಲಿಂಗ ನಾಯ್ಕ್ ಶ್ರೀಮತಿ ಸುಧಾ, ದೇವಳದ ಅರ್ಚಕರಾದ ಸುಬ್ರಮಣ್ಯ ಅಡಿಗ, ಕ್ಷೇತ್ರ ಪುರೋಹಿತರಾದ ಕೆ ನರಸಿಂಹ ಭಟ್ ಹಾಗೂ ಅರ್ಚಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು