BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಭಕ್ತಿಪಥ

​ಉಡುಪಿಯಿಂದ ಪ್ರಾರಂಭಗೊಂಡ ಆದಿಯೋಗಿ ರಥದ 70 ದಿನಗಳ ಶಿವ ಯಾತ್ರೆ

ಉಡುಪಿ:ಈಶ ಯೋಗ ಮಹಾಶಿವರಾತ್ರಿ ಶಿವಾಂಗ ಸಾಧನದ ಭಾಗವಾಗಿಆದಿಯೋಗಿ ರಥವು ಉಡುಪಿಯಿಂದ 70 ದಿನಗಳ ಶಿವ ಯಾತ್ರೆಯನ್ನು ಆರಂಭಿಸುವ ಮೂಲಕ 1000+ ಕಿ.ಮೀ ತೀರ್ಥ ಯಾತ್ರೆ ಯನ್ನು ಪೂರೈಸಲಿದೆಫೆಬ್ರವರಿ 13,   2026 ರಂದುವೈಭವಯುತ ಮಹಾಶಿವರಾತ್ರಿ  ಹಬ್ಬಕ್ಕೂ ಮುನ್ನಕೊಯಂಬತ್ತೂರಿನ ಈಶ ಯೋಗ ಕೇಂದ್ರದ ಬಳಿ ಇರುವ ಭವ್ಯ ಆದಿಯೋಗಿಯ ಬಳಿ ಯಾತ್ರೆಯು ಪೂರ್ಣಗೊಳ್ಳಲಿದೆ.


ಉಡುಪಿಯ ಪುತ್ತಿಗೆ ಶ್ರೀ ಕೃಷ್ಣ ಮಠದ ಪರ್ಯಾಯ ಶ್ರೀಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಶಿವ ಯಾತ್ರೆಯನ್ನು ಉದ್ಘಾಟಿಸಿದರು.


ಸದ್ಗುರುಗಳು ವಿನ್ಯಾಸಗೊಳಿಸಿರುವ ಶಕ್ತಿಯುತ ಆಧ್ಯಾತ್ಮಿಕ ಸಾಧನವಾದ ಶಿವಾಂಗ ಸಾಧನವು ಆಂತರ್ಯದಲ್ಲಿರುವ ಭಕ್ತಿಯನ್ನು ವ್ಯಕ್ತಪಡಿಸಲು ಮತ್ತು ಆದಿಯೋಗಿಯಾದ ಶಿವನತ್ತ ಗ್ರಹಣಶೀಲತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆದೇವಾಲಯಗಳ ನಗರವಾದ ಉಡುಪಿಯಿಂದ ಆರಂಭಗೊಂಡುಆದಿಯೋಗಿ ರಥವು ಡಿಸೆಂಬರ್ 12ರಂದು ಮಂಗಳೂರಿಗೆ ತಲುಪಲಿದ್ದುಅಲ್ಲಿಂದ ಪುತ್ತೂರುಸುಳ್ಯಮಡಿಕೇರಿಬೆಟ್ಟದಪುರಕೆ.ಆರ್ನಗರಮೈಸೂರುಸದ್ಗುರು ಸನ್ನಿಧಿ (ಚಿಕ್ಕಬಳ್ಳಾಪುರ), ಹೊಸಕೋಟೆಮಾಲೂರುರಾಯಕೋಟೆ ಮತ್ತು ಅವಿನಾಶಿ ಸೇರಿದಂತೆ ಪ್ರಮುಖ ಪಟ್ಟಣಗಳ ಮೂಲಕ ಪ್ರಯಾಣಿಸಿಈಶ ಯೋಗ ಕೇಂದ್ರವು ನೆಲೆಸಿರುವ ವೆಳ್ಳಿಯಂಗಿರಿ ಪರ್ವತದ ತಪ್ಪಲನ್ನು ತಲುಪಲಿದೆ.


ಶಿವನ ಮೇಲಿನ ತೀವ್ರತರ ಭಕ್ತಿಯ ಅಭಿವ್ಯಕ್ತಿಯಾಗಿ ರೂಪಿಸಲಾಗಿರುವ  ಯಾತ್ರೆಯು ಎಲ್ಲರನ್ನು ಸ್ವಾಗತಿಸುತ್ತದೆ ಮತ್ತು ಕರ್ನಾಟಕದಾದ್ಯಂತ ಸಾವಿರಾರು ಜನರಿಗೆ ರೂಪಾಂತರಣೀಯ ಪ್ರಯಾಣದಲ್ಲಿ ಭಾಗಿಯಾಗಲುಸ್ವಯಂಸೇವೆ ಮಾಡಲು ಮತ್ತು ತನ್ಮಯರಾಗಲು ಅವಕಾಶವನ್ನು ಒದಗಿಸುತ್ತದೆ.



ಅರ್ಪಣೆಯ ಮನೋಭಾವಕ್ಕೆ ಅನುಗುಣವಾಗಿಆದಿಯೋಗಿ ರಥವನ್ನು ಶಿವಾಂಗ ಸಾಧಕರು ಮತ್ತು ಭಕ್ತರು ತಾವಾಗಿಯೇ ಎಳೆಯುತ್ತಾರೆಇಡೀ ಪ್ರಯಾಣವನ್ನು ಶಿಸ್ತುಬದ್ಧಭಕ್ತಿಪೂರ್ವಕ ಭಾಗವಹಿಸುವಿಕೆಯ ಕ್ರಿಯೆಯಾಗಿ ರೂಪಾಂತರಿಸುತ್ತದೆಆದಿಯೋಗಿಯ ಸಾನ್ನಿಧ್ಯವನ್ನು ಹೊತ್ತ ರಥವು ಪ್ರತಿ ಸ್ಥಳದಲ್ಲಿ ಮೆರವಣಿಗೆಗಳುಅರ್ಪಣೆಗಳುಸ್ತೋತ್ರಪಠಣಗಳು ಮತ್ತು ಸಮುದಾಯ ಸಭೆಗಳಿಗೆ ಕೇಂದ್ರಬಿಂದುವಾಗಿರಲಿದೆನಿವಾಸಿಗಳುಭಕ್ತರು ಮತ್ತು ಅನ್ವೇಷಕರು ಯಾತ್ರೆಯ ಭಾಗವಾಗಿ ಸರಳ ಯೋಗ ಅಭ್ಯಾಸಗಳು ಅಥವಾ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಪ್ರಯಾಣ ಎಲ್ಲರಿಗೂ ಮುಕ್ತವಾಗಿರಲಿದ್ದುಭಾಗವಹಿಸಲು ಇಚ್ಚಿಸುವವರು ಒಂದು ದಿನಹಲವು ದಿನಗಳು ಅಥವಾ ಸಂಪೂರ್ಣ ಅವಧಿಗೆ ಸೇರಬಹುದು.


ಯಾವುದೇ ಹಂತದಲ್ಲಿ ಯಾತ್ರೆಯ ಭಾಗವಾಗುವ ಆಸಕ್ತಿ ಹೊಂದಿರುವವರು ಅಥವಾ ಸ್ವಯಂಸೇವೆಯ ಮೂಲಕ ಮತ್ತು ಸ್ಥಳೀಯ ಸೌಲಭ್ಯ ಒದಗಿಸುವ ಮೂಲಕ ಯಾತ್ರೆಗೆ ನೆರವಾಗಲು ಇಚ್ಚಿಸುವವರು ಶಿವ ಯಾತ್ರೆ ತಂಡವನ್ನು 98456 67758 ಅಥವಾ 95385 29407 ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು.




Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!